ಬೀದರ್: ‘ನಾಡು–ನುಡಿಯ ಹಬ್ಬ’ ಪ್ರಜಾವಾಣಿ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಇಲ್ಲಿಯ ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ಉಷಾ ಪ್ರಭಾಕರ್ ನೇತೃತ್ವದಲ್ಲಿ ಕಲಾವಿದರು ಬಸವಣ್ಣನವರ ವಿವಿಧೆಡೆ ವಚನಗಳ ನೃತ್ಯ ರೂಪಕ ಪ್ರದರ್ಶಿಸಿದರು.
ಅನನ್ಯಾ ಪ್ರಭಾಕರ್, ಎ.ಎಸ್. ಪ್ರಭಾಕರ್, ಪ್ರಥಮ ಪ್ರಭು, ನಿಧಿ ಠಾಕೂರ್, ಸಿದ್ದಿ ಠಾಕೂರ್, ಚಂದನಾ ಪರೇಶಾನೆ, ಜ್ಯೋತಿಕಾ, ಸಾಕ್ಷಿ, ಭಾರ್ಗವಿ ದೀಕ್ಷಿತ್, ಸೌಜನ್ಯ, ಮಹಾದೇವಿ, ಮೃದಾನಿ ಕುಲಕರ್ಣಿ, ಪ್ರಿಯಾ, ರೇಣುಕಾ, ಬಸವಶ್ರೀ, ಸಂಗಮ್ಮ, ರೇಖಾ ಬಸವರಾಜ, ಅರ್ಚನಾ ಅನಿಲ, ಪ್ರಫುಲ್ಲಾ ಪ್ರಭು ಮತ್ತು ಪ್ರಾಪ್ತಿ ಪ್ರಭು ಅವರು ‘ವಚನಾನಂದದಿಂದ ಕುಣಿ ಕುಣಿದಾಡುವೆ’ ಪ್ರದರ್ಶನ ನೀಡಿದರು.
ಪ್ರೊ.ಬಸವರಾಜ ಇಂಗಳೆ ನಿರ್ದೇಶನದಲ್ಲಿ ಕಲಾವಿದರು ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಸುಬ್ರಹ್ಮಣ್ಯ ಪ್ರಭು ಹಾಗೂ ಕ್ಷಮಾ ರಘುರಾಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.