ADVERTISEMENT

ಕವಿತೆ | ಕೊರೊನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 17:47 IST
Last Updated 4 ಏಪ್ರಿಲ್ 2020, 17:47 IST

ಶರತ್ಕಾಲ ಮೆಲ್ಲುತ್ತದೆ ಎಲೆಯೊಂದನು ನನ್ನ ಕೈಯಿಂದ:
ನಾವು ಗೆಳೆಯರು.

ಕಳಚುತ್ತೇವೆ ನಾವು ಕಾಲವನ್ನು ಬೀಜದೊಳಗಿಂದ
ಕಲಿಸುತ್ತೇವೆ ನಾವು ಅದಕ್ಕೆ ನಡೆದಾಡಲು.
ಕಾಲ ಮತ್ತೆ ಒಳಸೇರಿಕೊಳ್ಳುತ್ತದೆ ಚಿಪ್ಪಿನೊಳಗೆ.

ಭಾನುವಾರವೆಂಬುದು ನಮಗೆ ಕನ್ನಡಿಯೊಳಗೆ
ಜನರು ಮಲಗುತ್ತಾರೆ ಕನಸಿನಲ್ಲಿ,
ನಿಜ ಹೇಳುವುದು ನಾಲಗೆ ಮಾತ್ರ.

ADVERTISEMENT

ಹೊರಳುತ್ತದೆ ನನ್ನ ಕಣ್ಣು ಕೆಳಗೆ ಪ್ರಿಯತಮೆಯ ಸೊಂಟದೆಡೆಗೆ
ನಿಟ್ಟಿಸುತ್ತೇವೆ ನಾವು ಮುಖಾಮುಖಿಯಾಗಿ
ಪಿಸುಗುಡುತ್ತೇವೆ ನಾವು ಕತ್ತಲಲ್ಲಿ
ಪ್ರೀತಿಸುತ್ತೇವೆ ನೆನಪಿನ ಅಮಲಿನಲ್ಲಿ

ಮಲಗುತ್ತೇವೆ ಕಪ್ಪೆಚಿಪ್ಪಿನೊಳಗಿನ ವೈನ್ ನಂತೆ
ಚಂದ್ರನ ಹೊಂಗಿರಣದಲ್ಲಿ ಹೊಳೆಯುವ ಕಡಲಿನಂತೆ.

ನಿಲ್ಲುತ್ತೇವೆ ನಾವು ಕಿಟಿಕಿಯ ಬಳಿ ಅಪ್ಪಿಕೊಂಡು
ನೋಡುತ್ತಾರೆ ನಮ್ಮನ್ನು ಜನ ಬೀದಿಬದಿಯಲ್ಲಿ
ಗೊತ್ತು ಅವರಿಗೆ ಇದು ಸಮಯವೆಂದು!

ಇದು ಕಲ್ಲು ಅರಳುವ ಸಮಯ
ಕಳವಳಕ್ಕೆ ಹೃದಯ ಮಿಡಿಯುವ ಸಮಯ.
ಇದು ಸಮಯ, ಬಂದು ಹೋದ ಸಮಯ,
ಈಗ ಇದುವೇ ಸಮಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.