ADVERTISEMENT

ಜಿ.ವೆಂಕಟಸುಬ್ಬಯ್ಯ ಅವರ ಬಗ್ಗೆ ಆ.ರಾ.ಮಿತ್ರ ಬರೆದ ಪದ್ಯ: ಜೀವಿ

ಪ್ರೊ.ಅ.ರಾ.ಮಿತ್ರ
Published 19 ಏಪ್ರಿಲ್ 2021, 9:29 IST
Last Updated 19 ಏಪ್ರಿಲ್ 2021, 9:29 IST
ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ              ಚಿತ್ರಗಳು: ವಿಶ್ವನಾಥ ಸುವರ್ಣ
ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಚಿತ್ರಗಳು: ವಿಶ್ವನಾಥ ಸುವರ್ಣ   

ಕನ್ನಡ ಸಂಸ್ಕೃತಿಯನ್ನು ಎದೆಗೆ ಇಂಬಿಟ್ಟುಕೊಂಡ ಜಿವಿ

ನಿಮಗೆ ರಾಮಚಂದ್ರ ಶರ್ಮರು ಇಟ್ಟ ಸಾರ್ಥಕ ಶಬ್ದ “ಜೀವಿ”

ನೂರೆಂಟು ಗಾಯತ್ರಿ ಪಠಿಸಿದಿರಿ

ADVERTISEMENT

ಕನ್ನಡ ಮಂತ್ರವನ್ನು ಎಲ್ಲೆಲ್ಲು ಸಾರುತ್ತ ಸಾಗಿದಿರಿ

ಶಬ್ದಬ್ರಹ್ಮ, ಕಾವ್ಯಜೀವಿ,

ಶಿಸ್ತಿನ ವಸ್ತ್ರಜೀವಿ, ಜನಜೀವಿ,

ರಸಿಕಜೀವಿ, ಸಂದರ್ಭೋಚಿತ ವಾಕ್‍ಜೀವಿ ಎನಿಸಿದಿರಿ

ನಿಮ್ಮ ನೆನಪಲಿ ಕನ್ನಡದ ತೇರೆಳೆಯುತ ಸಾಗುತ್ತೇವೆ ಇನ್ನು ಮುಂದೆ...

-ಪ್ರೊ.ಅ.ರಾ.ಮಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.