ADVERTISEMENT

ದೇಶದ ಘನತೆಗೆ ಕುಂದು ತರುವ ಟೀಕೆ ಬೇಡ: ಅದಾನಿ

ಪಿಟಿಐ
Published 21 ಸೆಪ್ಟೆಂಬರ್ 2021, 16:09 IST
Last Updated 21 ಸೆಪ್ಟೆಂಬರ್ 2021, 16:09 IST
ಉದ್ಯಮಿ ಗೌತಮ್ ಅದಾನಿ
ಉದ್ಯಮಿ ಗೌತಮ್ ಅದಾನಿ   

ನವದೆಹಲಿ: ಭಾರತವು ಕೋವಿಡ್‌ ಪರಿಸ್ಥಿತಿ ನಿಭಾಯಿಸಿದ ಬಗೆಯನ್ನು ಸಮರ್ಥಿಸಿಕೊಂಡಿರುವ ಉದ್ಯಮಿ ಗೌತಮ್ ಅದಾನಿ, ‘ಮಾಧ್ಯಮ ವರದಿಗಳು ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಪಕ್ಷಪಾತಿಯಾಗಿ ಇರಬಾರದು, ದೇಶದ ಘನತೆಗೆ ಕುಂದುತರುವಂತೆಯೂ ಇರಬಾರದು’ ಎಂದು ಹೇಳಿದ್ದಾರೆ.

ಯುರೋಪ್‌, ಉತ್ತರ ಅಮೆರಿಕಾ ಮತ್ತು ಓಷ್ಯಾನಿಯಾಗಿಂತ ಹೆಚ್ಚಿನ ಜನಸಂಖ್ಯೆ ಇರುವ ದೇಶವು ಕೋವಿಡ್‌ ಬಿಕ್ಕಟ್ಟನ್ನು ಎಷ್ಟು ಸಮರ್ಥವಾಗಿ ನಿಭಾಯಿಸಿತು ಎಂಬುದನ್ನು ತಪ್ಪು ಹುಡುಕುವ ಭರದಲ್ಲಿ ಅಲಕ್ಷಿಸಲಾಯಿತು ಎಂದು ಅವರು ಹೇಳಿದ್ದಾರೆ.

‘ಕೆಲವು ವಿಚಾರಗಳಲ್ಲಿ ನಾವು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಬಹುದಿತ್ತೇನೋ. ಆದರೆ ಈ ದೇಶದ ಜನಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ, ಕೋವಿಡ್‌ ಸಾಂಕ್ರಾಮಿಕವು ಭಾರತಕ್ಕೆ ತಂದಿತ್ತ ಸವಾಲು ಇತರ ದೇಶಗಳಿಗೆ ಎದುರಾದ ಸವಾಲಿಗಿಂತ ದೊಡ್ಡದಾಗಿತ್ತು’ ಎಂದು ಅದಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಅದಾನಿ ಅವರು ತಮ್ಮ ಸಮೂಹದ ಮಾಧ್ಯಮ ಚಟುವಟಿಕೆಗಳನ್ನು ನಿಭಾಯಿಸಲು ಹಿರಿಯ ಪತ್ರಕರ್ತ ಸಂಜಯ್ ಪುಗಾಲಿಯಾ ಅವರನ್ನು ಈಚೆಗೆ ನೇಮಕ ಮಾಡಿಕೊಂಡಿದ್ದಾರೆ. ಅದಾನಿ ಸಮೂಹವು ಟಿ.ವಿ. ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಬಹುದು ಎಂಬ ಊಹಾಪೋಹಗಳು ಇದರಿಂದಾಗಿ ಸೃಷ್ಟಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.