ADVERTISEMENT

ಉದ್ದಿಮೆಗಳಿಗೆ ₹ 4.72 ಲಕ್ಷ ಕೋಟಿ ಹೊರೆ

ಕ್ರೆಡಿವಾಚ್‌ನ ಆನ್‌ಲೈನ್‌ ವಿಚಾರಗೋಷ್ಠಿಯಲ್ಲಿ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 20:15 IST
Last Updated 1 ಮೇ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳು ಒಟ್ಟಾರೆ ₹ 4.72 ಲಕ್ಷ ಕೋಟಿ ನಷ್ಟಕ್ಕೆ ಗುರಿಯಾಗಲಿವೆ ಎಂದು ಬೆಂಗಳೂರಿನ ತಂತ್ರಜ್ಞಾನ ಹಣ ಕಾಸು ಸಂಸ್ಥೆ ಕ್ರೆಡಿವಾಚ್‌ ವಿಶ್ಲೇಷಿಸಿದೆ.

ಕ್ರೆಡಿವಾಚ್‌ ನಡೆಸಿದ ಆನ್‌ಲೈನ್‌ ವಿಚಾರಗೋಷ್ಠಿಯಲ್ಲಿ (ವೆಬಿನಾರ್‌) ದೇಶಿ ಉದ್ದಿಮೆಗಳ ಮೇಲಿನ ‘ಕೋವಿಡ್‌–19’ ಪರಿಣಾಮಗಳನ್ನು ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ವೆಬಿ ನಾರ್‌ನಲ್ಲಿ ಕಂಪನಿಯ ವಹಿವಾಟು ಮುಖ್ಯಸ್ಥ ಗಣಪತಿ ಜಿಆರ್‌, ಉತ್ಪನ್ನಗಳ ಮುಖ್ಯಸ್ಥ ಹೇಮಂತ್‌ ಜಿಸಿ, ಡೇಟಾ ವಿಜ್ಞಾನಿ ರಾಜಾರಂ ಬಿಎಸ್‌ಆರ್‌ ಅವರು ಭಾಗವಹಿಸಿ, ಉದ್ದಿಮೆ ವಲಯ ಎದುರಿಸಲಿರುವ ಸಂಕಷ್ಟ ಮತ್ತು ಭವಿ ಷ್ಯದ ಮುನ್ನೋಟದ ಒಳನೋಟ ನೀಡಿದ್ದಾರೆ.

‘ಕೋವಿಡ್‌ ಬಿಕ್ಕಟ್ಟು ಉದ್ದಿಮೆ ಮೇಲೆ ಬೀರುತ್ತಿರುವ ಅಗಾಧ ಪರಿಣಾ ಮದಿಂದ ಉದ್ಭವಿಸಿರುವ ಸಂಕೀರ್ಣ ಪರಿಸ್ಥಿತಿಯ ಸಮಗ್ರ ದತ್ತಾಂಶಗಳನ್ನು ವಿಶ್ಲೇಷಿಸಿ ಮುನ್ನೋಟ ಕಂಡುಕೊಳ್ಳಲಾಗಿದೆ’ ಎಂದು ಗಣಪತಿ ಹೇಳಿದ್ದಾರೆ.

ADVERTISEMENT

‘ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವ ಹಿಸಲು ಹೊಸ ಮಾರ್ಗೋಪಾಯಗಳಿಂದ ಮಾತ್ರ ಸಾಧ್ಯವಾಗಲಿದೆ. ಉದ್ದಿಮೆ ಮುನ್ನಡೆಸಲು ಹೊಸ ಚಿಂತನೆ ರೂಢಿಸಿಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಹೇಮಂತ್‌ ಅಭಿಪ್ರಾಯಪಟ್ಟಿದ್ದಾರೆ.

‘ವಿವಿಧ ವಲಯಗಳ ಮೇಲೆ ಪಿಡು ಗಿನ ಪರಿಣಾಮವನ್ನು ಗರಿಷ್ಠ, ಮಧ್ಯಮ ಮತ್ತು ಕಡಿಮೆ – ಹೀಗೆ ಮೂರು ಬಗೆಯಲ್ಲಿ ವಿಂಗಡಿಸಬಹುದು’ ಎಂದು ರಾಜಾರಾಂ ವಿಶ್ಲೇಷಿಸಿದ್ದಾರೆ.

ಲಾಕ್‌ಡೌನ್‌ ಇನ್ನಷ್ಟು ದಿನ ಮುಂದುವರೆದರೆ ದೇಶಿ ಆರ್ಥಿಕತೆಗೆ ಆಗುವ ನಷ್ಟದ ಅಂದಾಜು ಕೂಡ ಪ್ರಮುಖವಾಗಿ ಚರ್ಚೆಗೆ ಒಳಗಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉದ್ಯಮಗಳ ನಷ್ಟವು ₹ 12.88 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಊಹಿಸಲಾಗಿದೆ.

ಉದ್ದಿಮೆ ವಹಿವಾಟಿನ ಸಂಸ್ಥೆಗಳು ಸಾಲಗಾರರು, ಹೂಡಿಕೆದಾರರು ಮತ್ತು ಸರಕು ಪೂರೈಸುವ ಪಾಲುದಾರರ ಜತೆಗೆ ಸ್ಪರ್ಧಾತ್ಮಕ ದರಗಳಲ್ಲಿ ಲಾಭ ಪಡೆಯಲು ಅವಕಾಶ ಇದೆ ಎಂದು ಚರ್ಚೆಯ ಕೊನೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.