ಬೆಂಗಳೂರು: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ಚಿನ್ನಾಭರಣ ಮಾರಾಟ ಕಂಪನಿಯಾದ ಜೋಯಾಲುಕ್ಕಾಸ್, ಕೇರಳದ ತ್ರಿಶೂರ್ನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿನ ಸೌಲಭ್ಯ ಹೆಚ್ಚಿಸಲು ₹ 50 ಲಕ್ಷ ದೇಣಿಗೆ ನೀಡಿದೆ.
ತ್ರಿಶೂರ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಗೆ ಈ ಮೊತ್ತವನ್ನು ಜೋಯಾಲುಕ್ಕಾಸ್ ಕಂಪನಿಯ ಸಿಎಂಡಿ ಜಾಯ್ ಅಲುಕ್ಕಾಸ್ ಅವರು ಹಸ್ತಾಂತರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ನೆರವಾಗಲು ಒಟ್ಟು ₹ 15 ಕೋಟಿ ಒದಗಿಸುವುದಾಗಿಯೂ ಜಾಯ್ ಅಲುಕ್ಕಾಸ್ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.