ADVERTISEMENT

ನಾಲ್ವರು ವಿದ್ಯಾರ್ಥಿಗಳು ನೀರುಪಾಲು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST

ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಗ್ರಾಮ ಸಮೀಪದ ಹೈರಿಗೆ ಕೆರೆಯಲ್ಲಿ ಮಂಗಳವಾರ ಸಂಜೆ ಈಜಲು ಹೋಗಿದ್ದ ನಾಲ್ವರು ಪ್ರೌಢಶಾಲಾ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.

ನಗರದ ಸಂತ ಜೋಸೆಫ್‌ ಶಾಲೆಯಲ್ಲಿ ಎಸ್ಎಸ್ಎಲ್‌ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭರತ್‌, ಧನಂಜಯ, ಯಶ್ವಂತ್‌ ಮತ್ತು ಅಜಯ್ ಮೃತಪಟ್ಟವರು. ಧನಂಜಯ, ಯಶ್ವಂತ್ ಮೃತದೇಹಗಳು ಪತ್ತೆಯಾಗಿದ್ದು, ಮತ್ತೆರಡು ಶವಗಳಿಗೆ ಶೋಧ ನಡೆದಿದೆ. ಪೂರ್ವಸಿದ್ಧತಾ ಪರೀಕೆ ಬರೆದು, ಪೋಷಕರಿಗೆ ವಿಷಯ ತಿಳಿಸದೆ ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರೂ ತೆರಳಿದ್ದರು.

‘ರಾತ್ರಿಯಾದ್ದರಿಂದ ಶವ ಹುಡುಕುವುದು ಕಷ್ಟಸಾಧ್ಯ. ಗಾಳಿ ವೇಗ ಹೆಚ್ಚಾಗಿರುವುದರಿಂದ ತೆಪ್ಪದಲ್ಲಿ ಶೋಧ ನಡೆಸುವುದು ಕ್ಲಿಷ್ಟಕರ. ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಬುಧವಾರ ಬೆಳಿಗ್ಗೆ ಮುಂದುವರಿಸಲಾಗುವುದು’ ಎಂದು ಡಿವೈಎಸ್ಪಿ ಭಾಸ್ಕರ್ ರೈ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.