ADVERTISEMENT

ವಾರ ಭವಿಷ್ಯ: 02-5-2021 ರಿಂದ 8-5-2021 ರವರೆಗೆ

ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 1 ಮೇ 2021, 19:30 IST
Last Updated 1 ಮೇ 2021, 19:30 IST
   

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

**

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಕುಟುಂಬದಲ್ಲಿ ಇದ್ದ ಸಂಘರ್ಷಗಳನ್ನು ದೂರಮಾಡಿ ಉತ್ತಮ ಹೊಂದಾಣಿಕೆಯನ್ನು ಪಡೆಯುವಿರಿ. ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳನ್ನು ನಡೆಸುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ಚಿನ್ನ, ಬೆಳ್ಳಿ ಗಟ್ಟಿಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಭೂ ಸಂಬಂಧಿ ವ್ಯವಹಾರಗಳನ್ನು ಮಾಡುವ ಮಧ್ಯವರ್ತಿಗಳಿಗೆ ವ್ಯವಹಾರ ವೃದ್ಧಿಸಿ ಹೆಚ್ಚು ಕಮಿಷನ್ ದೊರೆಯುತ್ತದೆ. ಪಿತ್ರಾರ್ಜಿತ ಆಸ್ತಿಗಾಗಿ ನಡೆಸುವ ಮಾತುಕತೆಯಲ್ಲಿ ಮೇಲುಗೈ ಸಾಧಿಸುವಿರಿ.ಸಾಮಾಜಿಕ ಕಾರ್ಯಕ್ರಮಗಳಿಗೆ ದೇಣಿಗೆಯನ್ನು ಕೊಡುವಿರಿ.ವೃತ್ತಿಯಲ್ಲಿದ್ದ ಗೊಂದಲಗಳು ಪರಿಹಾರವಾಗಿ ಮನಸ್ಸಿಗೆ ಆನಂದವಾಗುತ್ತದೆ. ಸಂಗಾತಿಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು.

**
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವಿದೇಶಿ ವ್ಯವಹಾರ ಮಾಡುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ವಿದೇಶಿ ಕಂಪನಿಗಳಿಗೆ ಉಪ ವಸ್ತುಗಳನ್ನು ತಯಾರಿಸಿ ಕೊಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಸ್ವಂತ ಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ ಪಡೆಯುವಿರಿ. ಬಿಚ್ಚು ಮನಸ್ಸಿನ ದಿಟ್ಟ ಹೇಳಿಕೆಗಳಿಂದ ಬಂಧುಗಳಲ್ಲಿ ನಿಷ್ಟೂರ ಬರಬಹುದು. ಸತ್ಯದರ್ಶನವಾದ ಮೇಲೆ ಎಲ್ಲರೂ ಸರಿ ಹೋಗುವರು. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಡಬೇಕು. ಹಲ್ಲು ನೋವು ನಿಮ್ಮನ್ನು ಭಾಧಿಸಬಹುದು. ದೈನಂದಿನ ಕೆಲಸ ಕಾರ್ಯಗಳಲ್ಲಿ ಚುರುಕುತನವನ್ನು ಕಾಣಬಹುದು. ಸಂಗಾತಿಯಿಂದ ಬರುವ ಸಲಹೆಗಳು ನಿಮಗೆ ಬಹಳ ಉಪಯುಕ್ತವಾಗಿರುತ್ತವೆ.

ADVERTISEMENT

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕೆಲಸಕಾರ್ಯಗಳಲ್ಲಿ ಉತ್ತಮ ಪ್ರಗತಿ ಇರುತ್ತದೆ, ನಿಕಟವರ್ತಿಗಳಿಂದ ಅನುಕೂಲಕರ ಸಹಾಯ ಒದಗಿಬರುವುದು. ಹೆಚ್ಚಿನ ಆತ್ಮಸ್ಥೈರ್ಯದಿಂದ ವ್ಯಾಪಾರ- ವ್ಯವಹಾರಗಳಲ್ಲಿ ತೊಡಗಿಕೊಂಡು ಹೆಚ್ಚಿನ ಲಾಭಗಳಿಸುವಿರಿ. ಸ್ವಯಂ ಉದ್ಯೋಗ ನಡೆಸುತ್ತಿರುವವರಿಗೆ ವ್ಯವಹಾರ ವಿಸ್ತರಣೆಯಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಸಿದ್ಧಪಡಿಸಿದ ಆಹಾರಗಳನ್ನು ತಯಾರಿಸಿ ಮಾರುವವರಿಗೆ ಲಾಭ ಇರುತ್ತದೆ. ಹೂವಿನ ವ್ಯಾಪಾರ ಮಾಡುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಕೃಷಿಯುತ್ಪನ್ನಗಳಿಗೆ ಹೆಚ್ಚಿನ ಬೆಲೆಯು ದೊರೆತು ಸಂತಸವಾಗುತ್ತದೆ. ಕೃಷಿ ವಿಸ್ತರಣೆಯನ್ನು ಮಾಡುವವರಿಗೆ ಉತ್ತಮ ಸಹಕಾರ ದೊರೆಯುತ್ತದೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಸ್ನೇಹಿತರೊಡನೆ ಮುಕ್ತವಾಗಿ ಮಾತನಾಡುವುದರಿಂದ ಮಧ್ಯೆ ಇದ್ದ ತಪ್ಪುಕಲ್ಪನೆಗಳು ದೂರವಾಗಿ ಸಂಬಂಧಗಳ ಮರು ಸ್ಥಾಪನೆಯಾಗುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಜೀವನದಲ್ಲಿ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಚಟುವಟಿಕೆಗಳಲ್ಲಿ ಕೊಂಚ ಹಿನ್ನಡೆಯಾಗಬಹುದು. ಉದ್ಯೋಗದಲ್ಲಿದ್ದ ಒತ್ತಡಗಳು ಕಡಿಮೆಯಾಗಿ ಮನಸ್ಸಿಗೆ ನಿರಾಳವೆನಿಸುವುದು.ಹಣದ ಒಳಹರಿವು ಸ್ವಲ್ಪಕಡಿಮೆ ಇರುವುದು. ಅನಿವಾರ್ಯವಾಗಿ ಬಂಧುಗಳ ಮಧ್ಯದಲ್ಲಿನ ವ್ಯಾಜ್ಯದ ಮಧ್ಯಸ್ಥಿಕೆಯನ್ನು ವಹಿಸಬೇಕಾಗಬಹುದು. ಕಾರ್ಖಾನೆಗಳಿಗೆ ಗುತ್ತಿಗೆ ಕಾರ್ಮಿಕರನ್ನು ಪೂರೈಸುವ ಸಂಸ್ಥೆಗಳಿಗೆ ಬೇಡಿಕೆ ಬರುತ್ತದೆ.

**
ಸಿಂಹ ರಾಶಿ( ಮಖ ಪೂರ‍್ವಪಲ್ಗುಣಿ ಉತ್ತರ ಫಲ್ಗುಣಿ 1)
ಯಂತ್ರೋಪಕರಣಗಳನ್ನು ವಿದೇಶದಿಂದ ತರಿಸಿ ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ.ಆತ್ಮ ಪರಿಶೋಧನೆಯಿಂದ ಕುಟುಂಬದಲ್ಲಿ ಕಂಡು ಬರುವ ಕೆಲವು ಗೊಂದಲಗಳನ್ನು ನಿವಾರಿಸಿಕೊಳ್ಳಬಹುದು. ನಿಷ್ಕಲ್ಮಶ ಭಾವನೆಯಿಂದ ಎಲ್ಲರನ್ನೂ ನೋಡಿದಾಗ ಸಂತೋಷ ಮೂಡುವುದು. ಆದಾಯ ತರುವ ಹೊಸ ಕೃಷಿ ಯಂತ್ರವೊಂದನ್ನು ಖರೀದಿ ಮಾಡುವಿರಿ. ತರಕಾರಿ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆಯುತ್ತದೆ.ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹೂಡಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ದುರಸ್ತಿ ಮಾಡುವವರ ವ್ಯವಹಾರ ವೃದ್ಧಿಸುತ್ತದೆ.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಸಹಾಯಗಳು ಹೆಚ್ಚಾಗುತ್ತವೆ. ಆರಂಭಿಸಿರುವ ಗೃಹ ಉದ್ಯಮದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ರಾಜಕೀಯ ನೇತಾರರು ತಮ್ಮ ಎದುರಾಳಿಗಳನ್ನು ಸದ್ದಿಲ್ಲದೆ ಮಟ್ಟಹಾಕಲು ತಂತ್ರವನ್ನು ರೂಪಿಸುವರು. ಹಿರಿಯ ಸ್ತ್ರೀಯರು ಪಾಲುದಾರರಾಗಿರುವ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ,ನಿಮ್ಮ ಮೇಲೆ ಅನಗತ್ಯ ದೂರುಗಳು ಬರಬಹುದು. ಭಿನ್ನಾಭಿಪ್ರಾಯದಿಂದ ನಿಂತುಹೋಗಿದ್ದ ಕಾರ್ಯಗಳು ಒಮ್ಮತದಿಂದ ಪುನ: ಆರಂಭವಾಗುವುದು. ಸರಕಾರೀ ಕೆಲಸಗಾರರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು.ಮಕ್ಕಳ ಏಳಿಗೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವವರಿಗೆ ಬೇಡಿಕೆ ಆಗುತ್ತದೆ.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಮಹಿಳಾ ರಾಜಕಾರಣಿಗಳು ಮಾಡುವ ಕಿತಾಪತಿಗಳು ಹಿರಿಯರಿಗೆ ಮುಜುಗರ ಆಗಬಹುದು. ಕೃಷಿಕರಿಗೆ ಉತ್ಪನ್ನಗಳ ಮೇಲೆ ಲಾಭ ಹೆಚ್ಚಬಹುದು. ಸಂಸಾರದಲ್ಲಿ ಮಾತನಾಡುವುದರಿಂದ ಮನಬಿಚ್ಚಿ ಮಾತನಾಡುವುದರಿಂದ ಸಮಸ್ಯೆಗಳು ಕರಗುತ್ತವೆ. ಲೇವಾದೇವಿ ಮಾಡುವುದು ಅಷ್ಟು ಒಳಿತಲ್ಲ, ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಸಮೂಹದಲ್ಲಿ ಮುಖಂಡರುಗಳು ಆಶ್ವಾಸನೆಯನ್ನು ಕೊಡುವಾಗ ಎಚ್ಚರವಿರಲಿ. ಸ್ವಯಂ ಉದ್ಯೋಗಿಗಳ ವ್ಯವಹಾರಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನಕ್ಕಾಗಿ ಬೇಕಾದ ಸೌಲಭ್ಯಗಳು ದೊರೆಯುತ್ತವೆ. ಸಂಗಾತಿಯ ಆದಾಯದಲ್ಲಿ ಏರಿಕೆಯಾಗುತ್ತದೆ. ಆಹಾರವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಸರಕಾರದಿಂದ ಆಗಬೇಕಾದ ಕೆಲಸಗಳು ಸ್ವಲ್ಪ ವಿಳಂಬವಾಗಬಹುದು.ಆದಾಯದಷ್ಟೇ ಖರ್ಚು ಇರುತ್ತದೆ. ದೂರ ಪ್ರಯಾಣದ ಸಾಧ್ಯತೆಗಳು ಕಂಡು ಬರುತ್ತಿವೆ.ಮನೆಯವರೊಂದಿಗೆ ದೈನಂದಿನ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡುವಿರಿ.ಆಸ್ತಿಯ ವಿಚಾರದಲ್ಲಿ ಕಲಹಗಳು ಏಳುವ ಸಾಧ್ಯತೆಗಳು ಇವೆ. ಒಡವೆವಸ್ತುಗಳನ್ನು ಈಗ ಕೊಳ್ಳಬಹುದು. ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ ಇರುತ್ತದೆ , ನಿಕಟವರ್ತಿಗಳಿಂದ ಸಾಕಷ್ಟು ಸಹಾಯ ಸಹ ದೊರೆಯುತ್ತದೆ. ವ್ಯಾಪಾರದಲ್ಲಿ ಗಳಿಕೆ ಹೆಚ್ಚಾಗುತ್ತದೆ. ನಿಮ್ಮ ಶತ್ರುಗಳನ್ನು ಮಣಿಸಲು ನೀವು ಮಾಡುವ ತಂತ್ರಗಳು ಸಾಕಷ್ಟು ಸಫಲತೆಯನ್ನು ಕೊಡುತ್ತವೆ. ಕೃಷಿಯಿಂದ ಅನಿರೀಕ್ಷಿತ ಆದಾಯ ವಿರುತ್ತದೆ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಆರಂಭಗೊಂಡ ಕೆಲವು ಕೆಲಸಗಳು ಭಿನ್ನಾಭಿಪ್ರಾಯದಿಂದ ನಿಧಾನವಾಗಬಹುದು. ತಾಳ್ಮೆಯಿಂದ ಕುಳಿತು ಯೋಚಿಸಿದಲ್ಲಿ ನಿಮ್ಮ ಕೆಲವು ಸಮಸ್ಯೆಗಳಿಗೆ ಪರಿಹಾರ ಗೋಚರಿಸುತ್ತದೆ.ವಾಹನಗಳ ದುರಸ್ತಿಯಿಂದ ಆದಾಯ ಹೆಚ್ಚುತ್ತದೆ.ನಿಮ್ಮ ಬಹು ಕಾಲದ ಬಯಕೆಗಳಲ್ಲಿ ಒಂದೆರಡು ಈಡೇರುತ್ತದೆ. ಉದ್ದಿಮೆದಾರರು ಹೊಸ ಯಂತ್ರೋಪಕರಣಗಳನ್ನು ಕೊಳ್ಳುವ ಸಾಧ್ಯತೆ ಇದೆ. ದ್ವಿದಳ ಧಾನ್ಯಗಳ ಸಗಟು ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಾಗಿ ಲಾಭವೂ ಸಹ ಹೆಚ್ಚುತ್ತದೆ. ಔಷಧಿಗೆ ಸಂಬಂಧಪಟ್ಟ ಗೆಡ್ಡೆಗೆಣಸುಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯುವವರ ಮಾರುಕಟ್ಟೆ ವಿಸ್ತರಿಸುತ್ತದೆ. ಹಣದ ಒಳಹರಿವು ತಕ್ಕ ಮಟ್ಟಿಗೆ ಇರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ನಿಗಾ ಇರಲಿ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕ್ರೀಡಾಪಟುಗಳಿಗೆ ಸ್ವಲ್ಪ ಹಿನ್ನಡೆಯ ಸಾಧ್ಯತೆ ಇದೆ, ಆದ್ದರಿಂದ ಅವರು ತಮ್ಮ ಅಭ್ಯಾಸದಲ್ಲಿ ಎಚ್ಚರ ವಹಿಸಬೇಕು. ಬಾಹ್ಯಾಕಾಶ ವಿಜ್ಞಾನಿಗಳಿಗೆ ಅವರ ಸಂಶೋಧನೆಯಲ್ಲಿ ಪ್ರಗತಿ ಇರುತ್ತದೆ, ಸಂಶೋಧನೆಗೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸಬಹುದು. ಸಹೋದ್ಯೋಗಿಗಳ ನಡುವೆ ಎದ್ದಿದ್ದ ವಿವಾದಗಳನ್ನು ಪರಿಹರಿಸಿ ಗೌರವಕ್ಕೆ ಪಾತ್ರರಾಗುವಿರಿ. ಮನೆಯವರ ಬಹುಕಾಲದ ಬಯಕೆಗಳನ್ನು ಪೂರೈಸುವಿರಿ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳುವುದು ಉತ್ತಮ. ಸಾಮಾಜಿಕ ಕಾರ್ಯಕರ್ತರುಗಳಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಕಾರ್ಮಿಕರಿಗೆ ಉತ್ತಮ ಸೌಲಭ್ಯಗಳು ಸಿಗುವ ಎಲ್ಲಾ ಲಕ್ಷಣಗಳಿವೆ. ಹಣದ ಒಳಹರಿವು ಉತ್ತಮವಾಗಿರುತ್ತದೆ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಾಭಾದ್ರ 1 2 3)
ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಸ್ವಲ್ಪ ಹಿಂಜರಿತ ಆಗಬಹುದು. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಯನ್ನು ಕಾಣಬಹುದು. ವೈದ್ಯರುಗಳಿಗೆ ಹೆಚ್ಚಿನ ಜನರು ಒದಗಿ ಆದಾಯದಲ್ಲಿ ಹೆಚ್ಚಳ ಆಗುತ್ತದೆ. ಔಷಧಿ ವ್ಯಾಪಾರ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿವಾಹ ಸಂಬಂಧಗಳಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡುಬರುತ್ತದೆ. ಮಿತ್ರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ಅಗತ್ಯ ,ನೀವೇ ತೊಂದರೆಗೆ ಸಿಲುಕಿಕೊಳ್ಳಬಹುದು. ಚಿಕ್ಕಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾವಹಿಸಿರಿ. ವಿದ್ಯುತ್ ಮತ್ತು ಬೆಂಕಿಯ ಜೊತೆ ಕೆಲಸ ಮಾಡುವವರು ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ.

**
ಮೀನ ರಾಶಿ( ಪೂರ್ವಾಭಾದ್ರ 4 ಉತ್ತರಾಭಾದ್ರ ರೇವತಿ)
ಸಂತೃಪ್ತ ಸಾಂಸಾರಿಕ ಜೀವನ ನಿಮ್ಮದಾಗುವುದು. ಕುಟುಂಬ ಸದಸ್ಯರೊಡನೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವಿರಿ.ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಸಹಾಯ ಪಡೆದು ಉತ್ತಮ ಕಾರ್ಯವನ್ನು ನಿರ್ವಹಿಸುವಿರಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ನಿಮ್ಮ ತಂಡಕ್ಕೆ ದೊರೆಯುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ ,ಆದ್ದರಿಂದ ಖರ್ಚಿಗೆ ಕಡಿವಾಣ ಹಾಕುವುದು ಅಗತ್ಯ. ಲೋಹದ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಿಸಿ ಲಾಭ ಹೆಚ್ಚುತ್ತದೆ. ಹಿರಿಯರ ಸಕಾಲಿಕ ಸಲಹೆಗಳು ನಿಮ್ಮನ್ನು ಗಂಡಾಂತರದಿಂದ ಪಾರು ಮಾಡುತ್ತದೆ. ಆರೋಗ್ಯದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು. ದೂರದ ಬಂಧುಗಳು ಮನೆಗೆ ಆಗಮಿಸುವರು. ವ್ಯವಹಾರಗಳಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಅರಿತು ನಿಮಗೆ ಹೆಚ್ಚಿನ ಸ್ಥಾನಮಾನಗಳು ದೊರೆಯುವ ಸಂದರ್ಭವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.