ADVERTISEMENT

ವಾರ ಭವಿಷ್ಯ 22-8-2021ರಿಂದ 28-8-2021ರವರೆಗೆ

ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 22 ಆಗಸ್ಟ್ 2021, 1:00 IST
Last Updated 22 ಆಗಸ್ಟ್ 2021, 1:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

****

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ADVERTISEMENT

ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಸೂಕ್ತ ಸಹಾಯ ದೊರೆಯುತ್ತದೆ. ಉನ್ನತಾಧಿಕಾರಿಗಳ ಬೆಂಬಲದಿಂದ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಿರಿ. ಜವಳಿ ವ್ಯಾಪಾರಿಗಳಿಗೆ ವ್ಯಾಪಾರ ಕುದುರುತ್ತದೆ. ಮೇಲ್ದರ್ಜೆ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ದೊರೆಯುತ್ತವೆ. ಆವೇಗದಿಂದ ಮಾತನಾಡುವುದು ನಿಮಗೆ ನಷ್ಟವನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಮತ್ತು ಸಲಕರಣೆಗಳು ದೊರೆಯುತ್ತವೆ. ಹಣದ ಹರಿವು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿ ಅನುಕೂಲಕರ ಜಾಗ ದೊರೆಯುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಮೇಲೆ ಆಸಕ್ತಿ ಮೂಡುತ್ತದೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಕಾಲ. ವ್ಯಾಸಂಗ ವಿಚಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಉದ್ದಿಮೆದಾರರು ಹೊಸ ಯಂತ್ರವೊಂದನ್ನು ಖರೀದಿ ಮಾಡುವ ಸಂದರ್ಭವಿದೆ. ಸಂಗಾತಿಯ ಆಶೋತ್ತರಗಳ ಈಡೇರಿಕೆಗಾಗಿ ಆಭರಣಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಸಮೂಹದಲ್ಲಿ ಮಾತನಾಡುವಾಗ ಎಚ್ಚರವಿರಲಿ. ಹಗುರವಾಗಿ ಮಾತನಾಡಿದಲ್ಲಿ ಅದೇ ನಿಮಗೆ ತಿರುಗುಬಾಣವಾಗಬಹುದು. ವರ್ಗಾವಣೆಯನ್ನು ಬಯಸುತ್ತಿದ್ದವರಿಗೆ ವರ್ಗಾವಣೆ ಸಿಗಬಹುದು. ನಿಮ್ಮ ಯೋಜನೆಗಳಿಗೆ ಇದ್ದ ಸರ್ಕಾರಿ ತೊಂದರೆಗಳು ನಿವಾರಣೆಯಾಗಿ ಯೋಜನೆಯನ್ನು ಆರಂಭಿಸಬಹುದು. ಹಣದ ಒಳಹರಿವು ನಿಮ್ಮ ಅಗತ್ಯಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ದಿನಸಿ ವ್ಯಾಪಾರಿಗಳಿಗೆ ಉತ್ತಮವಾದ ಲಾಭವಿರುತ್ತದೆ. ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಉತ್ತಮ ವ್ಯಾಪಾರ ನಡೆದು ಆದಾಯ ಹೆಚ್ಚುತ್ತದೆ. ನೀರಿನ ವ್ಯಾಪಾರವನ್ನು ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಮಕ್ಕಳ ಓದಿನ ಬಗ್ಗೆ ಅತೀವ ಕಾಳಜಿ ವಹಿಸುವರು. ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಟ್ಟಳೆಗಳು ನಿಧಾನವಾಗಬಹುದು. ಬೇರೆಯವರ ಸಲಹೆಗಳನ್ನು ಅಳವಡಿಸಿಕೊಳ್ಳುವ ಮುಂಚೆ ಅದರಲ್ಲಿರುವ ಸತ್ಯಾಂಶವನ್ನು ಪರಿಶೀಲಿಸಿಕೊಳ್ಳಿ. ಹಿರಿಯರ ಸಹಾಯದಿಂದ ನಿಮ್ಮ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿಕೊಳ್ಳುವಿರಿ. ತರಕಾರಿ ಬೆಳೆಗಾರರಿಗೆ ಹೆಚ್ಚಿನ ಆದಾಯವಿರುತ್ತದೆ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವರ ಸಾಧನೆಗೆ ತಕ್ಕಂತೆ ಪುರಸ್ಕಾರಗಳು ದೊರೆಯುತ್ತವೆ. ಅವಕಾಶವೊಂದರಿಂದ ಉತ್ತೇಜಿತರಾಗಿ ವ್ಯವಹಾರದಲ್ಲಿ ಭರವಸೆಯಿಟ್ಟು ಮುನ್ನುಗ್ಗುವಿರಿ. ಆಸೆಪಟ್ಟ ಭೂಮಿಯನ್ನು ಖರೀದಿ ಮಾಡಲು ಉತ್ಸುಕತೆ ತೋರುವಿರಿ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಗೌರವ ಮತ್ತು ಪುರಸ್ಕಾರಗಳು ದೊರೆಯುವ ಸಾಧ್ಯತೆ ಇದೆ. ಬಟ್ಟೆ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ಬಹಳ ದಿನದಿಂದ ಕಾಡಿಸುತ್ತಿದ್ದ ಕೆಲಸವೊಂದು ಈಗ ಸರಾಗವಾಗಿ ಆಗುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಸೋದರಿಯರಿಂದ ನಿಮ್ಮ ಕೆಲಸಗಳಿಗೆ ಅಡಚಣೆ ಬರಬಹುದು. ಕೆಲವರು ತಾಯಿಯ ಸಾಲವನ್ನು ಅನಿವಾರ್ಯವಾಗಿ ತೀರಿಸಬೇಕಾಗಬಹುದು.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ವಿವಾದಿತ ಆಸ್ತಿಯೊಂದು ನಿಮ್ಮ ಪಾಲಿಗೆ ಒದಗಿಬರಲಿದೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಸ್ವಲ್ಪ ಹಿನ್ನಡೆಯಾದರೂ ಉಪ ಉತ್ಪನ್ನಗಳಿಂದ ಅದನ್ನು ಸರಿದೂಗಿಸಬಹುದು. ಕೃಷಿಕರಿಗೆ ಹೆಚ್ಚಿನ ಅನುಕೂಲಗಳು ಒದಗಿಬರುತ್ತವೆ. ಶುಭಕಾರ್ಯಗಳಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಒದಗುತ್ತದೆ. ನಿಮ್ಮ ಮಾತಿಗೆ ಹೆಚ್ಚಿನ ಮಹತ್ವ ಬಂದು ಉದ್ಯೋಗಿಗಳ ನಡುವೆ ಕಿರಿಕಿರಿಯಾಗಬಹುದು. ಧನ ಆದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಆತ್ಮೀಯರೊಬ್ಬರ ಶಿಫಾರಸ್ಸಿನ ಮೇಲೆ ಉದ್ಯೋಗದಲ್ಲಿ ಅನುಕೂಲತೆ ಒದಗುತ್ತದೆ. ವಿದ್ಯುತ್ ಉಪಕರಣಗಳನ್ನು ಬಳಸುವಾಗ ಎಚ್ಚರದಿಂದಿರಿ. ಮಿತ್ರರಿಂದ ಸ್ವಲ್ಪ ಧನಸಹಾಯ ಒದಗಿ ಬರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ ಇರುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಕೆಲವು ರಾಜಕೀಯ ವ್ಯಕ್ತಿಗಳ ಸಾಧನೆಗಳು ಅವರ ನಾಯಕರುಗಳಿಗೆ ತೃಪ್ತಿಯನ್ನು ತರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಆದ ಪ್ರಗತಿಯನ್ನು ಕಂಡು ಸಂತೋಷಿಸುವಿರಿ. ಪ್ರೀತಿಪಾತ್ರರೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಿರಿ. ಲೇಖಕರು ಮತ್ತು ಪ್ರಕಾಶಕರೊಡನೆ ಒಪ್ಪಂದಗಳು ಏರ್ಪಟ್ಟು ಹೊಸ ಕೃತಿಗಳು ಬಿಡುಗಡೆಯಾಗುತ್ತವೆ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಕೆಲವು ಹಿರಿಯರಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ಸುಧಾರಣೆ ಆಗಲಿದೆ. ವ್ಯವಹಾರಗಳಲ್ಲಿ ನಿಧಾನಗತಿಯ ಪ್ರಗತಿ ಇರುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ಹಿರಿಯರಿಂದ ಅಮೂಲ್ಯ ವಸ್ತುಗಳನ್ನು ಪಡೆಯಲು ಯತ್ನ ಮಾಡುವಿರಿ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮತ್ತು ಹೊಂದಾಣಿಕೆಯನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವರಿಗೆ ಅವರ ಬುದ್ಧಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತಹ ಉದ್ಯೋಗ ದೊರೆತು ಸಂತಸವಾಗುತ್ತದೆ. ಮಕ್ಕಳ ನಡವಳಿಕೆಗಳ ಬಗ್ಗೆ ಸರಿಯಾಗಿ ಗಮನಹರಿಸುವುದು ಬಹಳ ಉತ್ತಮ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವುದು ಅತ್ಯುತ್ತಮ. ಹಿರಿಯರ ಮಾತಿಗೆ ಮನ್ನಣೆ ನೀಡುವುದರಿಂದ ನಿಮಗೆ ಒಳಿತಾಗುವುದು. ಆದರ್ಶ ಹೊಂದಿದ ಕೆಲಸಕಾರ್ಯಗಳಲ್ಲಿ ಜನರ ಸಹಕಾರ ದೊರೆಯುತ್ತದೆ. ಸರಕಾರಿ ಕೆಲಸಕಾರ್ಯಗಳಲ್ಲಿ ಸ್ವಲ್ಪ ಪ್ರಗತಿ ಇರುತ್ತದೆ. ಧನದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಲಲಿತಕಲೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಸೃಜನಶೀಲತೆಯ ಉತ್ತುಂಗಕ್ಕೆ ಏರುವ ಅವಕಾಶ ದೊರೆಯುತ್ತದೆ. ಕೆಲವೊಂದು ಘಟನೆಗಳು ಮನಸ್ಸಿಗೆ ಮುದನೀಡುತ್ತವೆ. ಆಪ್ತರ ಆರೋಗ್ಯ ಸುಧಾರಣೆಯಿಂದ ನಿಮಗೆ ತುಸು ನಿರಾಳವೆನಿಸುವುದು. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೆ ಅವರ ವ್ಯಕ್ತಿತ್ವ ಬೆಳೆಯುವಂತಹ ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಮಕ್ಕಳಿಂದ ಕೆಲವು ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಬಿಡುವಿಲ್ಲದ ಕೆಲಸಗಳಿರುತ್ತವೆ. ಸಂಗಾತಿಯ ಸಲಹೆ ಹೆಚ್ಚು ಉಪಯುಕ್ತತೆಯಿಂದ ಕೂಡಿರುತ್ತದೆ. ವ್ಯವಹಾರಗಳಲ್ಲಿ ಕಾವೇರಿದ ಮಾತುಗಳು ಆದರೂ ಒಂದು ಒಪ್ಪಂದಕ್ಕೆ ಬರುವಿರಿ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರ ಸುಳಿವು ನಿಮಗೆ ಸಿಕ್ಕಿ ಅವರ ಬಣ್ಣ ಬಯಲಾಗಲಿದೆ. ಸಹೋದರನಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ದೈನಂದಿನ ಕೆಲಸಗಳಲ್ಲಿ ಉತ್ಸಾಹ ಮೂಡಿ ಗಣನೀಯ ಸಾಧನೆ ಮಾಡುವಿರಿ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯದಿಂದ ಸಂತಸ ಮೂಡುವುದು. ಆರ್ಥಿಕವಾಗಿ ಚೇತರಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿರುವವರ ಆದಾಯದಲ್ಲಿ ನಿಧಾನವಾಗಿ ಏರಿಕೆಯನ್ನು ಕಾಣಬಹುದು. ಧನದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ತಂದೆಯಿಂದ ಧರ್ಮ ಸಹಾಯ ಅಥವಾ ಸ್ಥಿರಾಸ್ತಿ ಒದಗಬಹುದು.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಕೆಲವೊಂದು ಭರವಸೆಗಳು ಹರಿದುಬಂದು ನಿಮಗೆ ಸಾಕಷ್ಟು ಸಂತೋಷವಾಗುವುದು. ಸಾಮಾಜಿಕ ಸೇವಾಕಾರ್ಯದಲ್ಲಿ ತೊಡಗಿಕೊಳ್ಳುವ ಆಸಕ್ತಿ ಮೂಡುತ್ತದೆ. ವೃತ್ತಿಯಲ್ಲಿ ಸವಾಲುಗಳು ಎದುರಾಗಬಹುದು. ಎದೆಗುಂದದೆ ಮುನ್ನುಗ್ಗಿರಿ. ಹಿತಶತ್ರುಗಳ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ವ್ಯವಹಾರದಲ್ಲಿ ಆಗುತ್ತಿದ್ದ ನಷ್ಟವನ್ನು ನಿಮ್ಮ ಎಚ್ಚರಿಕೆಯ ನಡೆ ತಪ್ಪಿಸುತ್ತದೆ. ಚಿನ್ನಾಭರಣ ವ್ಯಾಪಾರಿಗಳು ಹೊಸ ನಮೂನೆಯ ಆಭರಣಗಳನ್ನು ಬಿಡುಗಡೆ ಮಾಡುವ ಸಂದರ್ಭವಿದೆ. ಆರ್ಥಿಕ ಪರಿಸ್ಥಿತಿಯು ಚೇತರಿಕೆಯ ಹಾದಿಯಲ್ಲಿ ಇರುತ್ತದೆ. ಕಾನೂನು ಕಾಯ್ದೆಗಳ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು ಇರುತ್ತದೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ವ್ಯವಹಾರದಲ್ಲಿ ಎಲ್ಲರನ್ನೂ ಹೊಂದಿಕೊಂಡು ಹೋಗುವ ನಿಮ್ಮ ಸ್ವಭಾವದಿಂದಾಗಿ ಮಹತ್ವದ ಸ್ಥಾನವೊಂದು ದೊರೆಯುತ್ತದೆ. ನಂಬಿಕಸ್ಥ ವ್ಯಕ್ತಿಗಳೆಂದು ತಿಳಿದು ನಿಮ್ಮ ವಿಚಾರಗಳನ್ನು ಹಂಚಿಕೊಳ್ಳುವುದು ನಿಮಗೆ ದುಬಾರಿಯಾಗಬಹುದು. ಯುವಕರಿಗೆ ಉದ್ಯೋಗದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುವರು. ಪ್ರೀತಿಸಿದ ಹೆಣ್ಣು ಕೈಕೊಡುವ ಸಾಧ್ಯತೆ ಇದೆ. ಕಣ್ಣಿನ ಸೋಂಕು ನಿವಾರಣೆಯಾಗುತ್ತದೆ. ನೀವು ಈ ಹಿಂದೆ ಕೂಡಿಟ್ಟ ಬಂಡವಾಳಗಳು ಈಗ ನಿಮ್ಮ ಕೈಹಿಡಿಯುತ್ತವೆ. ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಮೆಲುಕು ಹಾಕುವಿರಿ. ಆಸ್ತಿ ಮಾಡುವ ವಿಚಾರದಲ್ಲಿ ಸ್ವಲ್ಪ ತೊಡಕಾಗಬಹುದು. ಧನಾದಾಯ ಸಾಮಾನ್ಯವಾಗಿರುತ್ತದೆ. ಮಕ್ಕಳಿಂದ ನಿಮಗೆ ಗೌರವ ದೊರೆಯುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಕೆಲವರಿಗೆ ವೃತ್ತಿ ಬದಲಾವಣೆಯನ್ನು ಮಾಡುವ ಯೋಗವಿದೆ. ಹೊಸ ಆಭರಣಗಳನ್ನು ಕೊಳ್ಳಲು ಮನಸ್ಸಾದರೂ ಈಗ ಈಡೇರುವುದಿಲ್ಲ. ಹಿರಿಯರಿಂದ ಬರಬೇಕಾಗಿದ್ದ ಬಾಕಿ ಹಣ ಈಗ ಬರುತ್ತದೆ. ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ರಾಜಕೀಯವಾಗಿ ಮುನ್ನೆಲೆಗೆ ಬರುವರು. ಸಂಗಾತಿಯ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿರಿ. ಮಕ್ಕಳ ಕೆಲವು ಮಾತುಗಳು ನೋವುಂಟು ಮಾಡಬಹುದು. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಯಾವುದೇ ಅಡೆತಡೆ ಇಲ್ಲದೆ ಹರಿದುಬರುತ್ತದೆ. ವೈಯಕ್ತಿಕ ಆರೋಗ್ಯವನ್ನು ನಿರ್ಲಕ್ಷಿಸಬೇಡಿರಿ. ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ದೈವತಾರಾಧನೆಯನ್ನು ಮಾಡುವಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.