ಬಾಗಲಕೋಟೆ : ಮಲಪ್ರಭಾ ನದಿಯಲ್ಲಿ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿ ನೀರಿನ ಮಧ್ಯೆ ಎರಡು ಗಂಟೆಗಳ ಕಾಲ ಮುಳ್ಳಿನಕಂಟಿಯಲ್ಲಿ ಆಶ್ರಯ ಪಡೆದಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಗದಗ ಜಿಲ್ಲೆ ಕೊಣ್ಣೂರು ಗ್ರಾಮದ ಬಸಪ್ಪ ತಳವಾರ (58) ಕಾಲುಜಾರಿ ನೀರಿಗೆ ಬಿದ್ದಿದ್ದರು.ಕೊಚ್ಚಿ ಹೋಗಿ ನದಿಯಲ್ಲಿದ್ದ ಮುಳ್ಳಿನ ಕಂಟಿಯನ್ನೇ ಆಶ್ರಯಿಸಿ ನಿಂತಿದ್ದರು.
ಈ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಬಾದಾಮಿಯಿಂದ ಬಂದ ಅಗ್ನಿಶಾಮಕ ದಳದವರು ಬಸಪ್ಪನನ್ನು ರಕ್ಷಿಸಿ ನದಿ ದಡಕ್ಕೆ ಕರೆತಂದರು.
ಬೆಳಗಾವಿ ಜಿಲ್ಲೆಯಲ್ಲಿ ನದಿ ಪಾತ್ರದಲ್ಲಿ ಹೆಚ್ಚಿನ ಮಳೆ ಆಗುತ್ತಿರುವ ಕಾರಣ ಮಲಪ್ರಭೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ನವಿಲುತೀರ್ಥ ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ನೀರು ಹರಿಯ ಬಿಡಲಾಗಿರುವುದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.