ಬಾಗಲಕೋಟೆ: ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ಹಾಕಲು ಬಂದಾಗ ಇಳಕಲ್ ತಾಲ್ಲೂಕಿನ ತಳ್ಳಿಕೇರಿಯಲ್ಲಿ ಮಹಿಳೆಯೊಬ್ಬರು ರಂಪ-ರಾದ್ಧಾಂತ ನಡೆಸಿರುವುದು ವೈರಲ್ ಆಗಿದೆ.
ಜಿಲ್ಲಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಕೋವಿಡ್ ಲಸಿಕೆ ಮಹಾ ಅಭಿಯಾನದ ವೇಳೆ ಈ ನಾಟಕೀಯ ಬೆಳವಣಿಗೆ ನಡೆದಿದೆ. ಲಸಿಕೆ ಹಾಕಿಸಿಕೊಳ್ಳಲು ಒಪ್ಪದ ಮಹಿಳೆ ಗಲಾಟೆ ಮಾಡಿದ್ದಾರೆ.
'ನಾ ಒಲ್ಲೆ ನನ್ನನ್ನು ಬಿಟ್ಟು ಬಿಡಿ' ಎಂದು ರಾದ್ಧಾಂತ ಮಾಡಿದ್ದಾರೆ. ಬಾಯಿ ಬಡಿದುಕೊಂಡು ಚೀರಾಡಿದ ಮಹಿಳೆಯನ್ನು ಮನೆಮಂದಿ ಸೇರಿ ಗಟ್ಟಿಯಾಗಿ ಹಿಡಿದುಕೊಂಡು ಲಸಿಕೆ ಹಾಕಿಸಿದ್ದಾರೆ.
ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಹರಸಾಹಸ ಪಟ್ಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.