ADVERTISEMENT

ವಿಭಿನ್ನ ಹವಾಗುಣದಲ್ಲಿ ಈರುಳ್ಳಿ ಬೆಳೆದ ರೈತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 21:54 IST
Last Updated 8 ಮಾರ್ಚ್ 2020, 21:54 IST
ಹನುಮಂತರಾಯಪ್ಪನವರ ಹೊಲದಲ್ಲಿ ಬೆಳೆದಿರುವ ಈರುಳ್ಳಿ
ಹನುಮಂತರಾಯಪ್ಪನವರ ಹೊಲದಲ್ಲಿ ಬೆಳೆದಿರುವ ಈರುಳ್ಳಿ   

ದಾಬಸ್ ಪೇಟೆ: ಇಲ್ಲಿನ ಮಣ್ಣು ಮತ್ತು ಹವಾಗುಣಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು
ವ್ಯಾಪ್ತಿಯ ಬಹುತೇಕ ರೈತರು ಈರುಳ್ಳಿ ಬೆಳೆಯಲು ಮುಂದಾಗುವುದಿಲ್ಲ. ಆದರೆ,ನೆಲಮಂಗಲ ಬಳಿಯ ಚನ್ನೋಹಳ್ಳಿಯ ರೈತ ಹನುಮಂತರಾಯಪ್ಪ ಈರುಳ್ಳಿ ಬೆಳೆದು ಯಶಸ್ವಿಯಾಗಿದ್ದಾರೆ.

‘ನಾವು ಮೊದಲು ಈ ಭಾಗದ ಎಲ್ಲ ರೈತರಂತೆಸೊಪ್ಪು, ತರಕಾರಿ ಬೆಳೆಯುತ್ತಿದ್ದೆವು. ಬಳ್ಳಾರಿ ಜಿಲ್ಲೆಯ ಇಟಗಿ ಗ್ರಾಮದ ಕೆಲವು ಈರುಳ್ಳಿ ಬೆಳೆಗಾರರು ನಮಗೆ ಪ್ರೋತ್ಸಾಹ ನೀಡಿದರು. ಇಟಗಿಯಿಂದಲೇ ‘ರೆಡ್ ಡೈಮಂಡ್’ ಬೀಜ ತಂದು, ಅಲ್ಲಿನವರನ್ನೇ ಕರೆಸಿ ಬಿತ್ತನೆ ಮಾಡಲಾಯಿತು’ ಎಂದು ಹನುಮಂತರಾಯಪ್ಪ ಹೇಳಿದರು.

ದೊರೆಯಿತು ಲಾಭ:‘ಮುಕ್ಕಾಲು ಎಕರೆಯಲ್ಲಿ ನಾಲ್ಕು ತಿಂಗಳ ಹಿಂದೆ ಈರುಳ್ಳಿ ಬಿತ್ತಲಾಯಿತು. 44 ಚೀಲ ಈರುಳ್ಳಿ ಸಿಕ್ಕಿತು. ಅದೇ ಸಂದರ್ಭದಲ್ಲಿ, ನೆರೆ ಹಾವಳಿಯಿಂದ ಉತ್ತರ ಕರ್ನಾಟಕದಲ್ಲಿನ ಬೆಳೆ ಹಾಳಾಯಿತು. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಯಿತು. ಖರ್ಚು ಕಳೆದು ₹1.60 ಲಕ್ಷ ಲಾಭ ದೊರೆಯಿತು’ ಎಂದು ಅವರು ಹೇಳಿದರು.

ADVERTISEMENT

‘ಈಗಒಂದು ಎಕರೆಯಲ್ಲಿ ಬೆಳೆ ಬಂದಿದೆ. ಬೆಲೆ ಕಡಿಮೆಯಾಗಿದ್ದರೂ, ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.