ADVERTISEMENT

ಪುರಾತತ್ವ ಇಲಾಖೆಗೆ ಹೊಸ ಸೂಪರಿಟೆಂಡೆಂಟ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 12:07 IST
Last Updated 19 ಸೆಪ್ಟೆಂಬರ್ 2021, 12:07 IST

ಹೊಸಪೇಟೆ (ವಿಜಯನಗರ): ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರು ವರ್ಗಾವಣೆಗೊಂಡಿದ್ದಾರೆ.

ಕಾಳಿಮುತ್ತು ಅವರ ಜಾಗಕ್ಕೆ ಎನ್‌. ನಿಹಿಲ್‌ದಾಸ್‌ ಅವರು ವರ್ಗವಾಗಿದ್ದಾರೆ. ಗ್ರೇಟರ್‌ ನೋಯ್ಡಾದಿಂದ ಹಂಪಿ ವೃತ್ತಕ್ಕೆ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಕಾಳಿಮುತ್ತು ಅವರಿಗೆ ಇನ್ನಷ್ಟೇ ಸ್ಥಳ ತೋರಿಸಬೇಕಿದೆ. ನಿಹಿಲ್‌ದಾಸ್‌ ಸೋಮವಾರ (ಸೆ.20) ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT