ಹೊಸಪೇಟೆ (ವಿಜಯನಗರ): ಶುಕ್ರವಾರ ನಿಧನರಾಗಿದ್ದ ತಾಲ್ಲೂಕಿನ ಹಂಪಿ ಶಿವಾನಂದ ಯೋಗಾಶ್ರಮದ ಸದಾಶಿವಯೋಗಿ ಸ್ವಾಮೀಜಿ (89) ಅವರ ಅಂತ್ಯಕ್ರಿಯೆ ಶನಿವಾರ ತಾಲ್ಲೂಕಿನ ಕಮಲಾಪುರ ಸಮೀಪದ ಆಶ್ರಮದಲ್ಲಿ ನೆರವೇರಿತು.
ಸಿದ್ಧಯೋಗ ಪರಂಪರೆಯ ಪ್ರಕಾರ ಅವರ ಅಂತ್ಯಕ್ರಿಯೆ ಜರುಗಿತು. ತಿಪಟೂರು ಗುರುಕಲಾಶ್ರಮದ ತಿಪಟೂರು ಸ್ವಾಮೀಜಿ, ಸೊಲ್ಲಾಪುರ ಮಹಾರಾಜರು ಸೇರಿದಂತೆ ಅಪಾರ ಭಕ್ತವೃಂದದವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.