ADVERTISEMENT

ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಹೆಚ್ಚಿಸಿ: ಸಂಸದ ಪಿ.ಸಿ. ಮೋಹನ್‌

ರೈಲ್ವೆ ಅಧಿಕಾರಿಗಳಿಗೆ ಸಂಸದ ಪಿ.ಸಿ.ಮೋಹನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 20:03 IST
Last Updated 21 ಮೇ 2022, 20:03 IST
ಸಂಸದ ಪಿ.ಸಿ.ಮೋಹನ್‌ ಅವರು ರೈಲ್ವೆ ಕಾಮಗಾರಿಯ ರೂಪುರೇಷೆ ಪರಿಶೀಲಿಸಿದರು. ಶ್ಯಾಮ್‌ ಸಿಂಗ್‌ ಹಾಗೂ ಸಂಜೀವ್‌ ಕಿಶೋರ್‌ ಇದ್ದಾರೆ
ಸಂಸದ ಪಿ.ಸಿ.ಮೋಹನ್‌ ಅವರು ರೈಲ್ವೆ ಕಾಮಗಾರಿಯ ರೂಪುರೇಷೆ ಪರಿಶೀಲಿಸಿದರು. ಶ್ಯಾಮ್‌ ಸಿಂಗ್‌ ಹಾಗೂ ಸಂಜೀವ್‌ ಕಿಶೋರ್‌ ಇದ್ದಾರೆ   

ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಹೆಚ್ಚಿಸುವ ಸಂಬಂಧ ನಿಲ್ದಾಣದ ಆಡಳಿತದ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಸಂಸದ ಪಿ.ಸಿ.ಮೋಹನ್‌ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ನೈಋತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಅವರು ಕಾಮಗಾರಿಗಳ ಪ್ರಗತಿಯ ಕುರಿತು ಮಾಹಿತಿ ಪಡೆದರು.

‘ಕಾರ್ಮೆಲರಾಮ್‌ ಬಳಿಯ ರಸ್ತೆಯಲ್ಲಿಅಂದಾಜು ₹48.16 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ಅನುಮೋದನೆ ದೊರೆತಿದೆ. ಇದಕ್ಕಾಗಿ 2,465 ಚ.ಮೀ ಜಮೀನಿನ ಅಗತ್ಯವಿದ್ದು, ಬಿಬಿಎಂಪಿ ಜೊತೆ ಚರ್ಚಿಸಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಈ ತಿಂಗಳ ಅಂತ್ಯದೊಳಗೆ ಟೆಂಡರ್‌ ಕೂಡ ಕರೆಯಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

‘ಭೂಸ್ವಾಧೀನ ಕುರಿತು ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಅಗತ್ಯ ಸಹಕಾರ ನೀಡುವಂತೆ ಸೂಚಿಸುತ್ತೇನೆ’ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದರು.

ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸಂಜೀವ್‌ ಕಿಶೋರ್‌, ಡಿಆರ್‌ಎಂ ಶ್ಯಾಮ್‌ ಸಿಂಗ್‌, ಎಚ್‌.ಎಸ್‌.ವರ್ಮಾ, ಆರ್‌.ಎಲ್‌.ಮೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.