ಔರಾದ್: ಕಬ್ಬು ಸಾಗಣೆ ವೇಳೆ ತಾಲ್ಲೂಕಿನ ಬೇಲೂರ (ಎನ್) ಗ್ರಾಮದ ರೈತರೊಬ್ಬರಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ನಾರಂಜಾ ಸಕ್ಕರೆ ಕಾರ್ಖಾನೆ ಸಿಬ್ಬಂದಿಯನ್ನು ರೈತರು ಕೂಡಿ ಹಾಕಿದ ಘಟನೆ ನಡೆದಿದೆ.
ಬೇಲೂರ ಗ್ರಾಮದ ರೈತ ಮಹಿಳೆ ಕಲಾವತಿ ಅವರ ಹೊಲದಲ್ಲಿನ ಕಬ್ಬು ಸಾಗಣೆ ವೇಳೆ 20 ಟನ್ನಷ್ಟು ಕಬ್ಬು ಹಾಗೆ ಬಿಟ್ಟು ಹೋಗಿದ್ದರು. ಇದರಿಂದ ಸಿಟ್ಟಿಗೆದ್ದ ರೈತರು ಗ್ರಾಮಕ್ಕೆ ಆಗಮಿಸಿದ ಕಾರ್ಖಾನೆ ಸಿಬ್ಬಂದಿ ಅನ್ಸಾರಿಯನ್ನು ಕೂಡಿ ಹಾಕಿದರು. ಸ್ಥಳಕ್ಕೆ ಆಗಮಿಸಿದ ಸಂತಪುರ ಪೊಲೀಸರು ಸಮಾಧಾನ ಮಾಡಿ ನ್ಯಾಯ ಕೊಡಿಸುವುದಾಗಿ ಹೇಳಿದರು.
ಕಬ್ಬು ಸಾಗಾಟದ ವೇಳೆ 20 ಟನ್ ಕಬ್ಬು ಹಾಗೆಯೇ ಬಿಟ್ಟು ಹೋಗಿದ್ದಾರೆ. ಇದರಿಂದ ರೈತ ಮಹಿಳೆ ಕಲಾವತಿಗೆ ₹50 ಸಾವಿರ ಹಾನಿಯಾಗಿದೆ. ಕಾರ್ಖಾನೆಯವರು ಹಾನಿ ಭರಿಸುವ ತನಕ ನಮ್ಮ ಹೋರಾಟ ಹೀಗೆ ನಡೆಯಲಿದೆ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.