ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 2,213 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಇಬ್ಬರಿಗೆ ಮಾತ್ರ ಸೋಂಕು ಇರುವುದು ಖಚಿತವಾಗಿದೆ.
ಬುಧವಾರ ಯಾರೂ ಗುಣಮುಖವಾಗಿಲ್ಲ. ಸಾವಿನ ಪ್ರಕರಣವೂ ವರದಿಯಾಗಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ 42ಕ್ಕೆ ಏರಿದೆ.
ಸೋಂಕಿತರ ಪೈಕಿ ಇಬ್ಬರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 17 ಮಂದಿ ಮನೆಯಲ್ಲೇ ಇದ್ದುಕೊಂಡು ಆರೈಕೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 32,288 ಮಂದಿಗೆ ಸೋಂಕು ತಗುಲಿದೆ. ಗುಣಮುಖರಾದವರ ಸಂಖ್ಯೆಯಲ್ಲಿ (31,908) ವ್ಯತ್ಯಾಸವಾಗಿಲ್ಲ.
ಬುಧವಾರ ದೃಢಪಟ್ಟ ಎರಡು ಪ್ರರಕಣಗಳಲ್ಲಿ ಒಂದು ಪ್ರಕರಣ ಗುಂಡ್ಲುಪೇಟೆ ತಾಲ್ಲೂಕು ಹಾಗೂ ಇನ್ನೊಂದು ಹನೂರು ತಾಲ್ಲೂಕಿಗೆ ಸೇರಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.