ADVERTISEMENT

ಭಾಷೆ, ಸಂಸ್ಕೃತಿ ಉಳಿವು ಎಲ್ಲರ ಜವಾಬ್ದಾರಿ

ಅರೆಭಾಷೆ ಸಂಸ್ಕೃತಿ ಶಿಬಿರ ಉದ್ಘಾಟಿಸಿದ ಲಕ್ಷ್ಮೀನಾರಾಯಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 2:55 IST
Last Updated 12 ಸೆಪ್ಟೆಂಬರ್ 2021, 2:55 IST
ಏನೆಕಲ್ಲಿನಲ್ಲಿ ಉದಯ ಕುಮಾರ್ ಬಾನಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಏನೆಕಲ್ಲಿನಲ್ಲಿ ಉದಯ ಕುಮಾರ್ ಬಾನಡ್ಕ ಕಾರ್ಯಕ್ರಮ ಉದ್ಘಾಟಿಸಿದರು.   

ಸುಬ್ರಹ್ಮಣ್ಯ: ‘ಹಿಂದಿನ ಕಾಲದ ಸಾಂಪ್ರದಾಯಿಕ ಆಚರಣೆಗಳು ಇಂದಿನ ಮಕ್ಕಳಿಗೆ ಕಾಣಲು ಸಾಧ್ಯವಾಗುತ್ತಿಲ್ಲ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ಎಲ್ಲರ ಜವಾಬ್ದಾರಿ ಆಗಬೇಕಿದೆ’ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಏನೆಕಲ್ಲು ಗ್ರಾಮದ ಅರೆಭಾಷೆ ಬಾಂಧವರ ಆಶ್ರಯದಲ್ಲಿ ನಡೆದ ಅರೆಭಾಷೆ ಸಂಸ್ಕೃತಿ ಶಿಬಿರದಲ್ಲಿ ಅವರು ಮಾತನಾಡಿದರು.

ರಾಜ್ಯದ ಹಲವಾರು ಪ್ರಾದೇಶಿಕ ಭಾಷೆಗಳು ವಿವಿಧ ಕಾರಣಗಳಿಂದ ಅಳಿವಿನ ಅಂಚಿನಲ್ಲಿವೆ. ಭಾಷೆಗಳು ವಿನಾಶವಾದಲ್ಲಿ ಆ ಭಾಷೆಯನ್ನು ಆಡುವ ಸಮುದಾಯ ನಾಶವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ADVERTISEMENT

ಶಿಬಿರ ಉದ್ಘಾಟಿಸಿ ಮಾತನಾಡಿದ ಏನೆಕಲ್ಲು ಗ್ರಾಮ ಮಾಗಣಿ ಗೌಡ ಉದಯ ಕುಮಾರ್ ಬಾನಡ್ಕ, ಅರೆಭಾಷೆ ಬಾಂಧವರ ಆಚಾರ, ವಿಚಾರಗಳನ್ನು ಮತ್ತೊಮ್ಮೆ ಇಂದಿನ ಜನಾಂಗಕ್ಕೆ ತಿಳಿಸುವ ಅಗತ್ಯ ಇದೆ ಎಂದರು.

ಏನೆಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭವಾನಿ ಶಂಕರ ಪೂಂಬಾಡಿ, ಕುಲ್ಕುಂದ ಬಸವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂದ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ ಕೋಟಿ ಗೌಡನ ಮನೆ, ಜಯಂತಿ ವೆಂಕಟೇಶ್ ಪರಮಲೆ, ಭವ್ಯಾ ಕುಮಾರಿ, ದಿಲೀಪ್ ಉಪ್ಪಳಿಕೆ, ಶಿವರಾಮ ನೆಕ್ರಾಜೆ, ಅಕಾಡೆಮಿ ಸದಸ್ಯರಾದ ಜಯಪ್ರಕಾಶ್ ಮೋಂಟಡ್ಕ, ದಯಾನಂದ ಹೊಸಂಗಡಿಬೈಲು, ಚಂದ್ರಶೇಖರ ಮುತ್ಲಾಜೆ, ಶಿವರಾಮ ಏನೆಕಲ್ಲು, ಪೂರ್ಣಚಂದ್ರ, ಚಂದ್ರಶೇಖರ, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.