ADVERTISEMENT

ಸಿ.ಎ ಪ‍ರೀಕ್ಷೆ: ಮಂಗಳೂರಿನ ರುತ್ ರಾಷ್ಟ್ರಕ್ಕೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 21:41 IST
Last Updated 13 ಸೆಪ್ಟೆಂಬರ್ 2021, 21:41 IST
ಸಿ.ಎ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಮಂಗಳೂರಿನ ರುತ್ ಡಿಸಿಲ್ವಗೆ ಪಾಲಕರು ಸಿಹಿ ತಿನ್ನಿಸಿ, ಸಂಭ್ರಮಿಸಿದರು.
ಸಿ.ಎ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಮಂಗಳೂರಿನ ರುತ್ ಡಿಸಿಲ್ವಗೆ ಪಾಲಕರು ಸಿಹಿ ತಿನ್ನಿಸಿ, ಸಂಭ್ರಮಿಸಿದರು.   

ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಮಂಗಳೂರಿನ ರುತ್ ಕ್ಲಾರ್ ಡಿಸಿಲ್ವ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಸೋಮವಾರ ಫಲಿತಾಂಶ ಪ್ರಕಟಗೊಂಡಿದೆ.

‘ಈ ಬಾರಿಯ ಪರೀಕ್ಷೆ ಕಠಿಣವಾಗಿತ್ತು. ಆದರೆ ನಾನು ಉತ್ತಮವಾಗಿ ಪರೀಕ್ಷೆ ಎದುರಿಸಿದ್ದೆ. ಪ್ರಥಮ ರ‍್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಸಿ.ಎ. ಪರೀಕ್ಷೆ ತೇರ್ಗಡೆಯಾಗುವುದೇ ಅದ್ಭುತ’ ಎಂದು ರುತ್ ಡಿಸಿಲ್ವ ಪ್ರತಿಕ್ರಿಯಿಸಿದರು.

‘ಸಿ.ಎ. ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದು ರುತ್ ಇತಿಹಾಸ ಸೃಷ್ಟಿಸಿದ್ದಾರೆ. ಆಕೆ ಛಲದಿಂದ ಅಧ್ಯಯನ ಮಾಡಿ, ಸಾಧನೆ ಮಾಡಿದ್ದಾರೆ’ ಎಂದು ಮಾರ್ಗದರ್ಶಕ ನಂದಗೋಪಾಲ್ ತಿಳಿಸಿದರು.

ADVERTISEMENT

ರುತ್ ಅವರಿಗೆ ತರಬೇತಿ ನೀಡಿದ್ದ ವಿವಿಯನ್ ಪ್ರತಿಕ್ರಿಯಿಸಿ, ‘ರುತ್ ಸಂವಹನ ಕೌಶಲ ಅತ್ಯುತ್ತಮವಾಗಿದೆ. ತನ್ನ ಸಾಮರ್ಥ್ಯದ ಬಗ್ಗೆ ದೃಢ ನಂಬಿಕೆ ಹೊಂದಿರುವುದೇ ಆಕೆಯ ಸಾಧನೆಯ ಯಶಸ್ಸು’ ಎಂದಿದ್ದಾರೆ.

ಈಕೆ ಮಂಗಳೂರಿನ ರಫರ್ಟ್ ಡಿಸಿಲ್ವ ಮತ್ತು ರೋಸಿ ಮಾರಿಯಾ ಡಿಸಿಲ್ವ ದಂಪತಿ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.