ADVERTISEMENT

ನೀರಿನಲ್ಲಿ ಕೊಚ್ಚಿ ಹೋದ ಯುವಕ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 4:08 IST
Last Updated 2 ಸೆಪ್ಟೆಂಬರ್ 2021, 4:08 IST
   

ಉಪ್ಪಿನಂಗಡಿ: ಇಲ್ಲಿನ ಕೆಮ್ಮಾರ ಎಂಬಲ್ಲಿ ತೋಡಿನಲ್ಲಿ ಸೇತುವೆಯ ಅಡಿಯಲ್ಲಿ ಹಳೆಯ ಮುಳುಗು ಸೇತುವೆ ಮೇಲೆ ನಿಂತು ನೀರಿನಲ್ಲಿ ತೇಲಿ ಬರುತ್ತಿದ್ದ ತೆಂಗಿನ ಕಾಯಿ ಸಂಗ್ರಹಿಸುತ್ತಿದ್ದಾಗ ಆಕಸ್ಮಿಕವಾಗಿ ಹರಿಯುವ ನೀರಿಗೆ ಬಿದ್ದು, ಯುವಕನೊಬ್ಬ ಬುಧವಾರ ಕಣ್ಮರೆಯಾಗಿದ್ದಾರೆ.

ಇಸ್ಮಾಯಿಲ್ ಎಂಬುವರ ಪುತ್ರ ಶಫಿಕ್ (18) ಕಣ್ಮರೆಯಾದ ಯುವಕ. ಮುಳುಗು ಸೇತುವೆ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಆ ಪರಿಸರದಲ್ಲಿ ಒಂದು ತಾಸು ಹುಡುಕಾಟ ನಡೆಸಲಾಯಿತು. ಶೋಧ ಕಾರ್ಯ ಮುಂದುವರಿದಿದೆ.

ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದ ಸದಸ್ಯರು, ಸ್ಥಳೀಯ ಯುವಕರು, ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.