ಸುಳ್ಯ: ತಾಲ್ಲೂಕಿನ ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ನಡೆದ ಲಸಿಕಾ ಶಿಬಿರದಲ್ಲಿ ಯುವಕನಿಗೆ ಆರೋಗ್ಯ ಸಹಾಯಕಿಯೊಬ್ಬರು ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಿದ್ದಾರೆ.
ಬುಧವಾರ ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ ನಡೆಯುತ್ತಿತ್ತು. ಕೂಟೇಲು ಸಿಆರ್ಸಿಯ ಬಾಲಸುಬ್ರಹ್ಮಣ್ಯಂ ಅವರ ಪುತ್ರ, ಕೆ.ಬಿ. ಅರುಣ್ ಮೊದಲ ಡೋಸ್ ಪಡೆಯಲು ಬಂದಿದ್ದರು. ಆರೋಗ್ಯ ಸಹಾಯಕಿಯು ಅರುಣ್ ಅವರಿಗೆ ಲಸಿಕೆ ನೀಡಿದ್ದರು. ಇದಾದ ನಂತರವೂ ಮಾತ್ರೆ ಪಡೆಯುವ ಉದ್ದೇಶದಿಂದ ಅರುಣ್ ಅಲ್ಲೇ ಕುಳಿತಿದ್ದರು. ಸ್ವಲ್ಪ ಸಮಯದಲ್ಲಿ ಹೊಸ ಸಿರಿಂಜ್ನೊಂದಿಗೆ ಬಂದ ಆರೋಗ್ಯ ಸಹಾಯಕಿಯು ಬೇರೆಯವರು ಕುಳಿತಿದ್ದಾರೆ ಎಂದು ಭಾವಿಸಿ ಪುನಃ ಅರುಣ್ ಅವರಿಗೇ ಲಸಿಕೆ ನೀಡಿದ್ದಾರೆ.
‘ಆತಂಕ ಪಡಬೇಕಾಗಿಲ್ಲ. ಸರಿಯಾಗಿ ಆಹಾರ ಸೇವನೆ ಮಾಡಲಿ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.