ADVERTISEMENT

ಹಳ್ಳಿಗಳಲ್ಲಿ ಪುರುಷ ಸ್ವಸಹಾಯ ಸಂಘ ತೆರೆಯಲು ₹500 ಕೋಟಿ: ಶಾಲಿನಿ ರಜನೀಸ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 2:57 IST
Last Updated 3 ನವೆಂಬರ್ 2022, 2:57 IST
ಕಾರ್ಯಕ್ರಮಕ್ಕೂ ಮುನ್ನ ಗಿಲಕಿಗಳನ್ನು ಹಿಡಿದು ಕಲಾವಿದರೊಂದಿಗೆ ಶಾಲಿನಿ ರಜನೀಶ್ ಬೆರೆತು ಸಂಭ್ರಮಿಸಿದ ಕ್ಷಣ  –ಪ್ರಜಾವಾಣಿ ಚಿತ್ರ
ಕಾರ್ಯಕ್ರಮಕ್ಕೂ ಮುನ್ನ ಗಿಲಕಿಗಳನ್ನು ಹಿಡಿದು ಕಲಾವಿದರೊಂದಿಗೆ ಶಾಲಿನಿ ರಜನೀಶ್ ಬೆರೆತು ಸಂಭ್ರಮಿಸಿದ ಕ್ಷಣ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರತಿ ಹಳ್ಳಿಯಲ್ಲೂ ಪುರುಷ ಸ್ವಸಹಾಯ ಸಂಘ ತೆರೆಯಲು ₹500 ಕೋಟಿ ಮೀಸಲಿಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕರ ಕಾರ್ಯಾಲಯ ಹಾಗೂ ಕ್ಷೇತ್ರೀಯ ನಿರ್ದೇಶಕರ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 29 ಸಾವಿರ ಹಳ್ಳಿಗಳಿದ್ದು, ಎಲ್ಲೆಡೆಯೂ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಪುರುಷ ಸ್ವಸಹಾಯ ಸಂಘಗಳನ್ನು ರಚಿಸುವ ಉದ್ದೇಶ ಇದೆ. ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್‌), ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯುವ ಜನರಿಗೆ ವೃತ್ತಿ ತರಬೇತಿ ನೀಡಿ ಅವರ ಕೌಶಲ ಹೆಚ್ಚಿಸುವುದು ಇದರ ಉದ್ದೇಶ ಎಂದರು.

ADVERTISEMENT

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯುವಜನ ಅಧಿಕಾರಿಗಳಿದ್ದು, ತಾಲ್ಲೂಕು ಮಟ್ಟದಲ್ಲೂ ಆಪ್ತ ಸಮಾಲೋಚಕರನ್ನು
ನಿಯೋಜಿಸಿಕೊಳ್ಳಲಾಗುತ್ತಿದೆ. 28 ತಾಲ್ಲೂಕುಗಳಲ್ಲಿ ಈ ಹುದ್ದೆ ಖಾಲಿ ಇದ್ದು, ಭರ್ತಿ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎಂ.ಪಿ.ಮುಲಾಯ್‌ ಮಹಿಲನ್, ನೆಹರು ಯುವ ಕೇಂದ್ರ ಸಂಘಟನೆ ಕ್ಷೇತ್ರೀಯ ನಿರ್ದೇಶಕ ಎಂ.ಎನ್.ನಟರಾಜ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.