ಹಾಸನ: ಜಿಲ್ಲೆಯಲ್ಲಿ ಸೆ.22 ರಂದು ನಡೆಯುತ್ತಿರುವ ಲಸಿಕಾ ಮೇಳದಲ್ಲಿ 50 ಸಾವಿರ ಮಂದಿಗೆ ಗುರಿ ನಿಗದಿಪಡಿಸಿದ್ದು, ಇದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್- 19 ಲಸಿಕಾ ಮೇಳಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೂರ್ವ ತಯಾರಿ ಸಭೆ ನಡೆಸಿ ಮಾತನಾಡಿದ ಅವರು, ಎರಡನೇ ಡೋಸ್ ಬಾಕಿ ಇರುವ ಗ್ರಾಮಗಳಿಗೆ ಭೇಟಿ ನೀಡಿ, ಲಸಿಕೆ ಗುರಿಸಾಧಿಸಬೇಕು. ಮನೆಯಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದರೆ ಮನೆಯ ಸದಸ್ಯರನ್ನುತಪಾಸಣೆ ಮಾಡಿ, ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಬೇಕು ಎಂದು ನಿರ್ದೇಶನನೀಡಿದರು.
ಹೋಂ ಐಸೋಲೇಷನ್ನಲ್ಲಿರುವವರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಕೊರೊನಾ ಲಸಿಕೆ ಬಾಕಿ ಇರುವ ಗ್ರಾಮವಾರು ಪಟ್ಟಿಯನ್ನು ತಹಶೀಲ್ದಾರ್ಗಳು ಪರಿಶೀಲಿಸಿ, ಗ್ರಾಮಸಹಾಯಕರು, ಗ್ರಾಮಲೆಕ್ಕಿಗರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿಗಳಿಗೆಮಾಹಿತಿ ನೀಡುವಂತೆ ತಿಳಿಸಿದರು.
ಕೋವಿಡ್-19 ತಪಾಸಣೆ ನಿಗದಿತ ಗುರಿ ಸಾಧಿಸಬೇಕು. ಪಾಸಿಟಿವಿಟಿ ದರವನ್ನು ಕಡಿಮೆ ಮಾಡಬೇಕು.
ಹೋಂ ಐಸೋಲೇಶನ್ ನಲ್ಲಿ ಇರುವವರನ್ನು ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.