ಮಡಿಕೇರಿ: ಕೊಡಗು ಪ್ರೆಸ್ಕ್ಲಬ್ನ 2021-24ನೇ ಅವಧಿಗೆ ಅಧ್ಯಕ್ಷರಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ.
ಕೊಡಗು ಪ್ರೆಸ್ಕ್ಲಬ್ ನೂತನ ನಿರ್ದೇಶಕರ ಸಭೆ ಸೋಮವಾರ ಪತ್ರಿಕಾ ಭವನದಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ರೆಜಿತ್ ಕುಮಾರ್ ಗುಹ್ಯ ಆಯ್ಕೆಯಾಗಿದ್ದಾರೆ. ಹಿರಿಯ ಉಪಾಧ್ಯಕ್ಷರಾಗಿ ಆರ್. ಸುಬ್ರಮಣಿ, ಉಪಾಧ್ಯಕ್ಷರಾಗಿ ಚೀಯಂಡಿ ತೇಜಸ್ ಪಾಪಯ್ಯ, ಖಜಾಂಚಿಯಾಗಿ ಬೊಳ್ಳಜಿರ ಬಿ. ಅಯ್ಯಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎನ್. ಚಂದ್ರಮೋಹನ್, ಸಹ ಕಾರ್ಯದರ್ಶಿಯಾಗಿ ಪ್ರಜ್ಞಾ ರಾಜೇಂದ್ರ ಆಯ್ಕೆಯಾಗಿದ್ದಾರೆ.
ಶಿಸ್ತು ಸಮಿತಿ ಅಧ್ಯಕ್ಷರಾಗಿ ಸುನಿಲ್ ಪೊನ್ನೇಟಿ, ಶಿಸ್ತು ಸಮಿತಿ ಸದಸ್ಯರಾಗಿ ನವೀನ್ ಡಿಸೋಜ, ಕುಡಿಯರ ದಿವಾಕರ ಬೋಜಪ್ಪ, ಈ.ಆರ್.ವಿಶ್ವಕುಮಾರ್, ಕುಪ್ಪಂಡ ದತ್ತಾತ್ರಿ ಆಯ್ಕೆಯಾಗಿದ್ದಾರೆ. ನಾಮ ನಿರ್ದೇಶಕರಾಗಿ ಪುತ್ತಂ ಪ್ರದೀಪ್, ಬಿ.ಎ ಭಾಸ್ಕರ್, ಕೆ. ಆರ್. ಪ್ರಸಿನ್ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.