ADVERTISEMENT

ಸೋಮವಾರಪೇಟೆ: ಇಬ್ಬರು ಮಕ್ಕಳ ಸಂಶಯಾಸ್ಪದ ಸಾವು, ಜೋಕಾಲಿಯಿಂದ ದುರಂತ?

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 16:14 IST
Last Updated 30 ಜೂನ್ 2021, 16:14 IST
ಮನಿಕ್ಷಾ
ಮನಿಕ್ಷಾ   

ಸೋಮವಾರಪೇಟೆ (ಕೊಡಗು ಜಿಲ್ಲೆ): ತಾಲ್ಲೂಕಿನ ಉಂಜಿನಳ್ಳಿ ಗ್ರಾಮದಲ್ಲಿ ಬುಧವಾರ ಇಬ್ಬರು ಮಕ್ಕಳು ಸಂಶಯಾಸ್ಪದ ರೀತಿಯಲ್ಲಿ‌ ಮೃತಪಟ್ಟಿದ್ದಾರೆ.

ಗ್ರಾಮದ ಕೃಷಿಕ ಎಚ್.ಆರ್. ಗಿರೀಶ್ ಎಂಬುವವರ ಮಕ್ಕಳಾದ ಮನಿಕ್ಷಾ (15) ಹಾಗೂ ಪೂರ್ಣೇಶ್ (12) ಮೃತಪಟ್ಟವರು.

ಪಕ್ಕದಲ್ಲಿರುವ ತಮ್ಮ ಅಜ್ಜಿ ಅಜ್ಜನ ಮನೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ತೋಟದಿಂದ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ಮನೆಯೊಳಗೆ ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಿದ್ದರು. ಜೋಕಾಲಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾರೆ ಎಂದು ಗಿರೀಶ್ ಅವರು ಸೋಮವಾರಪೇಟೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಣೋತ್ತರ ಪರೀಕ್ಷೆಯ ಬಳಿ ಸಾವು ಅಕಸ್ಮಿಕವೋ, ಆತ್ಮಹತ್ಯೆಯೊ ಎಂದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.