ADVERTISEMENT

ಬಿಜೆಪಿ ಟಿಕೆಟ್‌ ಆಕಾಂಕ್ಷಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 5:51 IST
Last Updated 21 ಮಾರ್ಚ್ 2023, 5:51 IST
ಕೆಜಿಎಫ್‌ ತಾಲ್ಲೂಕು ಬೇತಮಂಗಲದಲ್ಲಿ ಸೀರೆ ಸಾಗಿಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಕೆಜಿಎಫ್‌ ತಾಲ್ಲೂಕು ಬೇತಮಂಗಲದಲ್ಲಿ ಸೀರೆ ಸಾಗಿಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.   

ಕೆಜಿಎಫ್‌: ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಸೀರೆಗಳನ್ನು ಬೇತಮಂಗಲ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನಕೃಷ್ಣ ಮತ್ತು ಅವರ ಚಾಲಕ ತೇಜು ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಬೇತಮಂಗಲ ಗ್ರಾಮದ ಮಸೀದಿ ಬಳಿ ಸೀರೆಗಳನ್ನು ಹಂಚಲು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇರೆಗೆ ಬೇತಮಂಗಲ ಸಬ್‌ ಇನ್‌ಸ್ಪೆಕ್ಟರ್ ಸತೀಶ್‌ ಮತ್ತು ತಂಡ ಕಾರಿನ ತಪಾಸಣೆ ಮಾಡಿದಾಗ 45 ಸೀರೆಗಳು ಕಂಡು ಬಂದವು.

ಅವುಗಳು ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನಕೃಷ್ಣ ಅವರಿಗೆ ಸೇರಿದ್ದೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಅವುಗಳ ಮೌಲ್ಯ ₹ 14,400 ಎಂದು ಪೊಲೀಸರು
ತಿಳಿಸಿದ್ದಾರೆ.

ADVERTISEMENT

ಸೀರೆ ಸಾಗಿಸುತ್ತಿದ್ದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಾರಿನ ಮೇಲೆ ಮೋಹನಕೃಷ್ಣ ಅವರು ಕೈಮುಗಿಯುತ್ತಿರುವ ಚಿತ್ರ ಇದೆ.

ಪ್ರಕರಣ ದಾಖಲಿಸಿಕೊಂಡಿರುವ ಬೇತಮಂಗಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.