ADVERTISEMENT

‘ನಾಡ ಕಚೇರಿಯಲ್ಲಿ ಮೂಲಸೌಲಭ್ಯ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 11:06 IST
Last Updated 21 ಸೆಪ್ಟೆಂಬರ್ 2021, 11:06 IST
ಅಳವಂಡಿಯ ನಾಡಕಚೇರಿ ಹೊರಗೆ ಬಿಸಿಲಲ್ಲಿ ನಿಂತು ಕಿಟಕಿಯಲ್ಲಿ ಅರ್ಜಿಸಲ್ಲಿಸುತ್ತಿರುವ ಸಾರ್ವಜನಿಕರು
ಅಳವಂಡಿಯ ನಾಡಕಚೇರಿ ಹೊರಗೆ ಬಿಸಿಲಲ್ಲಿ ನಿಂತು ಕಿಟಕಿಯಲ್ಲಿ ಅರ್ಜಿಸಲ್ಲಿಸುತ್ತಿರುವ ಸಾರ್ವಜನಿಕರು   

ಅಳವಂಡಿ: ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಇಲ್ಲಿನ ನಾಡಕಚೇರಿಗೆ ವದಗನಾಳ, ಹಿರೇಸಿಂದೊಗಿ, ನಿಲೊಗಿಪುರ, ಬೊಚನಹಳ್ಳಿ, ಮೊರನಹಳ್ಳಿ, ಕವಲೂರು, ಹಟ್ಟಿ, ಬೆಟಗೇರಿ, ಡಂಬ್ರಹಳ್ಳಿ, ಕವಲೂರು, ಘಟ್ಟಿರಡ್ಡಿಹಾಳ ಸೇರಿದಂತೆ ಸುತ್ತಮುತ್ತಲಿನ ಸುಮಾರು 28 ಹಳ್ಳಿಗಳಿಂದ ಜನರು ಬರುತ್ತಾರೆ .

ಹೊಲದ ಪಹಣಿ, ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮಹಿಳೆಯರು, ಸಾರ್ವಜನಿಕರು, ವಿದ್ಯಾರ್ಥಿಗಳು ನಿತ್ಯ ಬರುತ್ತಾರೆ.

ಕಚೇರಿಯ ಕೆಲಸಕ್ಕೆ ಬರುವವರು ಬಿಸಿಲಿನಲ್ಲಿಯೇ ನಿಂತು ಅರ್ಜಿ ಸಲ್ಲಿಸಬೇಕು. ಕೆಲ ಸಮಯ ನೆಟ್‌ವರ್ಕ್ ಸಮಸ್ಯೆ ಉಂಟಾದರಂತೂ ಬಿಸಿಲಿನಲ್ಲಿಯೇ ಸಾಲಿನಲ್ಲಿ ನಿಂತುಕೊಳ್ಳಬೇಕಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕಚೇರಿಯ ಬಳಿ ನೆರಳಿನ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

ಅಲ್ಲದೇ ಕಚೇರಿಯಲ್ಲಿ ಮೂಲಸೌಕರ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯ ಹಾಗೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಚೇರಿಯಲ್ಲಿ ಮೂಲಸೌಕರ್ಯ ಹಾಗೂ ನೆರಳಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಕವಲೂರು ಗ್ರಾಮಸ್ಥರು ಆಗ್ರಹಿಸಿದರು.

ನಾಡ ಕಚೇರಿಗೆ ಬರುವವರಿಗೆ ನೆರಳಿನ ವ್ಯವಸ್ಥೆ ಮಾಡಿಸುವಂತೆ ತಹಶೀಲ್ದಾರ್‌ ಅವರಲ್ಲಿ ಮನವಿ ಸಲ್ಲಿಸಿದ್ದು, ಶೌಚಾಲಯ ಕೂಡ ನಿರ್ಮಿಸುವಂತೆ ಗ್ರಾ.ಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಮತ್ತೊಮ್ಮೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
- ಶರಣಬಸವೇಶ ಕಳ್ಳಿಮಠ, ಉಪ ತಹಶೀಲ್ದಾರ್, ಅಳವಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.