ADVERTISEMENT

₹ 20 ಸಾವಿರ ಲಂಚ ಪಡೆಯುವಾಗ ಎಪಿಎಂಸಿ ಕಾರ್ಯದರ್ಶಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 19:29 IST
Last Updated 21 ಮಾರ್ಚ್ 2023, 19:29 IST
ಕೆ.ಸಿ.ಸಾಕಮ್ಮ
ಕೆ.ಸಿ.ಸಾಕಮ್ಮ   

ಮಳವಳ್ಳಿ: ಉಗ್ರಾಣದ ಬಾಡಿಗೆ ನಿಗದಿಪಡಿಸಲು ಟೆಂಡರ್‌ದಾರರಿಂದ ₹ 20 ಸಾವಿರ ಲಂಚ ಪಡೆಯುವಾಗ ಪಟ್ಟಣದ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಕೆ.ಸಿ.ಸಾಕಮ್ಮ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.

ತಾಲ್ಲೂಕಿನ ಕಲ್ಕುಣಿ ಗ್ರಾಮದ ಆನಂದ್ ಅವರು ಎಪಿಎಂಸಿ ಉಪವಿಭಾಗದ ಕಿರುಗಾವಲು ಕೇಂದ್ರದ ಉಗ್ರಾಣದ ಟೆಂಡರ್ ಪಡೆದಿದ್ದರು. ಕಡಿಮೆ ಬಾಡಿಗೆ ನಿಗದಿಪಡಿಸಲು ಕೆ.ಸಿ.ಸಾಕಮ್ಮ ಅವರು ₹ 50 ಸಾವಿರ ಲಂಚ ಕೇಳಿದ್ದು, ₹ 20 ಸಾವಿರಕ್ಕೆ ಒಪ್ಪಿದ್ದರು. ಆನಂದ್ ಮಂಡ್ಯದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಎಪಿಎಂಸಿ ಕಚೇರಿಯಲ್ಲಿ ಸಿಬ್ಬಂದಿ ಸಿದ್ದರಾಜು ಮೂಲಕ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ಇಬ್ಬರನ್ನೂ ಬಂಧಿಸಿದರು. ರಾಮನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪುಟ್ಟಮಾದಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.