ADVERTISEMENT

ಚಾಮರಾಜನಗರಕ್ಕೆ ಹೋಗದಿರುವ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡಿಲ್ಲವೇ: ಬೊಮ್ಮಾಯಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 20:11 IST
Last Updated 6 ಅಕ್ಟೋಬರ್ 2021, 20:11 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮೈಸೂರು: ‘ಗುರುವಾರ ಮಾತ್ರ ಅಲ್ಲ; ಇನ್ನೂ ಹಲವು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಅಲ್ಲಿಗೆ ಹೋಗದವರು ಅಧಿಕಾರ ಕಳೆದುಕೊಂಡಿಲ್ಲವೇ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು.

ಬುಧವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀರಾವರಿ ಸಚಿವನಾಗಿ ಚಾಮರಾಜಗರಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಮುಖ್ಯಮಂತ್ರಿಗೆ ಎಲ್ಲಾ ಜಿಲ್ಲೆಗಳು ಒಂದೇ. ಈ ಜಿಲ್ಲೆಗೆ ಹೋದರೆ ಹಲವಾರು ವಿಚಾರ ತಿಳಿದುಕೊಂಡು ಅಭಿವೃದ್ಧಿ ಮಾಡಬಹುದು. ನಂಜುಂಡಪ್ಪ ವರದಿ ಪ್ರಕಾರ ಕೆಲ ತಾಲ್ಲೂಕುಗಳು ಹಿಂದುಳಿದಿವೆ. ಅಂಥ ಪ್ರದೇಶಕ್ಕೆ ಹೋಗುವುದು ಮುಖ್ಯಮಂತ್ರಿಯ ಕರ್ತವ್ಯ. ನಂಬಿಕೆ, ಅಪನಂಬಿಕೆ ವ್ಯಕ್ತಿಗತವಾದುದು’ ಎಂದು ಹೇಳಿದರು.

‘ಅಶೋಕ್‌ ಬಂದ ಮೇಲೆ ನಮ್ಮದೇನಿದೆ?’‌
ಮೈಸೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗೆ ಮೊದಲೇ ಸುದ್ದಿಗಾರರೊಂದಿಗೆ ಮಳೆ, ರಸ್ತೆ ಗುಂಡಿ ವಿಚಾರವಾಗಿ ಮಾತನಾಡಲು ಕಂದಾಯ ಸಚಿವ ಆರ್‌.ಅಶೋಕ್‌ ಮುಂದಾದರು. ಆಗ ಅಲ್ಲಿಗೆ ಬಂದ ಬಸವರಾಜ ಬೊಮ್ಮಾಯಿ, ‘ಅಶೋಕ್‌ ಬಂದಮೇಲೆ ನಮ್ಮದೇನಿದೆ?‌‌’ ಎಂದು ಕಾಲೆಳೆದರು. ತಕ್ಷಣವೇ ಕಂದಾಯ ಸಚಿವರು ಹೊರಡಲು ಅನುವಾದರು. ಆಗ, ಮುಖ್ಯಮಂತ್ರಿ, ‘ಅಶೋಕ್‌ ಬನ್ನಿ ಬನ್ನಿ’ ಎಂದು ಕರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.