ADVERTISEMENT

ರಾಜೀವ್‌ಗೆ ‍ಪರಿಪೂರ್ಣ ಅವಕಾಶ ಸಿಗಲಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:30 IST
Last Updated 21 ಮಾರ್ಚ್ 2023, 4:30 IST
ಮೈಸೂರಿನಲ್ಲಿ ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದರು
ಮೈಸೂರಿನಲ್ಲಿ ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದರು   

ಮೈಸೂರು: ‘ಎಚ್‌.ವಿ.ರಾಜೀವ್ ಅವರಿಗೆ ಪರಿಪೂರ್ಣ ಅವಕಾಶಗಳು ಸಿಗಬೇಕು’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಅವರು ಮಾತನಾಡಿದರು.

‘ಸಮಾಜಮುಖಿ ಚಿಂತನೆಗಳನ್ನು ಸಾಕಾರ ಮಾಡುವ ಮನಸ್ಸನ್ನು ಅವರು ಹೊಂದಿದ್ದಾರೆ. ಅಂತಹ ಕಾರ್ಯ ಮಾಡಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ತೋರಿದ್ದಾರೆ. ಭಗವಂತನ ಕೃಪೆಯಿಂದ ಅಂತಹ ಅವಕಾಶಗಳು ಕೂಡಿ ಬರಲಿ’ ಎಂದರು.

ADVERTISEMENT

‘ರಾಜೀವ್‌ಗೆ ಅವಕಾಶ ಸಿಗಬೇಕು. ಆದರೆ, ಅದಕ್ಕಾಗಿ ಮತ್ತೊಬ್ಬರನ್ನು ದೂರ ಮಾಡಬೇಕು ಎನ್ನುವುದು ನಮ್ಮ ಆಶಯ ಅಲ್ಲ. ಅವರೂ ಆಗಲಿ; ಇವರಿಗೂ ಅಂತಹ ಸ್ಥಾನ ಸಿಗಲಿ. ಸಮುದಾಯದವರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಆದರೆ, ನಾವು ಒಳಗಿಳಿದು ಮೂಲ ವಿಮರ್ಶೆ ಮಾಡಿಲ್ಲ. ಸಮಾಜಕ್ಕೆ ಹಾನಿಯಾಗದಂತೆ ಎಲ್ಲರಿಗೂ ಒಳ್ಳೆಯದಾಗಬೇಕು. ಯಾರ ವಿರುದ್ಧವೂ ನಾವು ಬಂದಿಲ್ಲ. ರಾಜೀವ್‌ಗೆ ಶ್ರೇಯಸ್ಸು ಹುಡುಕಿ ನಾವು ಬಂದಿದ್ದೇವೆ’ ಎಂದು ಹೇಳಿದರು.

‘ಒಂದು ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳಬೇಕು. ಮಂದಿರ ನಿರ್ಮಾಣ ಪೂರ್ಣವಾದರೆ ನಮ್ಮ ಕಾರ್ಯ ಮುಗಿಯುವುದಿಲ್ಲ. ರಾಮ ರಾಜ್ಯದ ಕನಸು ನನಸಾಗಬೇಕು. ಪ್ರಜಾರಾಜ್ಯದಲ್ಲಿ ಪ್ರಜೆಗಳೇ ರಾಜರು. ರಾಮ ರಾಜ್ಯದ ಕನಸು ನನಸಾಗಬೇಕಾದರೆ ಪ್ರಜೆಗಳು ರಾಮರಾಗಬೇಕು. ಸದ್ಗುಣ, ದೇಶ ಭಕ್ತಿ ಬೆಳೆಸಿಕೊಳ್ಳಬೇಕು. ರಾಮಭಕ್ತಿ‌ ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.