ADVERTISEMENT

ಬಿ.ಆರ್. ಪ್ರಾಜೆಕ್ಟ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 14:21 IST
Last Updated 8 ಆಗಸ್ಟ್ 2020, 14:21 IST
ಭದ್ರಾವತಿ ಬಿ.ಆರ್.ಪ್ರಾಜೆಕ್ಟ್‌ನ ಐಬಿ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹಿತರ ಜತೆ ಹೆಜ್ಜೆ ಹಾಕಿದರು
ಭದ್ರಾವತಿ ಬಿ.ಆರ್.ಪ್ರಾಜೆಕ್ಟ್‌ನ ಐಬಿ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹಿತರ ಜತೆ ಹೆಜ್ಜೆ ಹಾಕಿದರು   

ಭದ್ರಾವತಿ: ಸ್ಯಾಂಡಲ್‌ವುಡ್‌ ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ ಶನಿವಾರ ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದು, ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.

ರಾಜ್ಯ ಅರಣ್ಯ ಇಲಾಖೆ ರಾಯಭಾರಿ ಆಗಿರುವ ದರ್ಶನ್‌ಭಾನುವಾರ ಸಂಜೆಯವರೆಗೆ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಭದ್ರಾ ಅಭಯಾರಣ್ಯ, ಜಲಾಶಯದ ವೀಕ್ಷಣೆ ಮಾಡಿ ಅಭಯಾರಣ್ಯದ ಹಲವೆಡೆ ಸಂಚರಿಸಿ ವನ್ಯ ಪ್ರಾಣಿಗಳ ಛಾಯಾಚಿತ್ರ ಸೆರೆ ಹಿಡಿಯಲಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ದರ್ಶನ್ ಜತೆಗೆ ಹಾಸ್ಯ ನಟ ಚಿಕ್ಕಣ್ಣ ಹಾಗೂ ಕೆಲ ಆತ್ಮೀಯರು ಇದ್ದಾರೆ. ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.