ADVERTISEMENT

ಹುಲಿ ದಾಳಿಗೆ ಬಾಲಕ ಬಲಿ: ದಕ್ಷಿಣ ಕೊಡಗಿನಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 21:47 IST
Last Updated 20 ಫೆಬ್ರುವರಿ 2021, 21:47 IST

ಪೊನ್ನಂಪೇಟೆ (ಕೊಡಗು): ಸಮೀಪದ ಕುಮಟೂರು ಗ್ರಾಮದ ಪಣಿ ಯರವರ ಅಯ್ಯಪ್ಪ ಎಂಬ ಬಾಲಕ (14), ಶನಿವಾರ ರಾತ್ರಿ ಹುಲಿ ದಾಳಿಗೆ ಬಲಿಯಾಗಿದ್ದಾನೆ.

ಗ್ರಾಮದ ಕೋಟ್ರಂಗಡ ಬಿದ್ದಪ್ಪ ಅವರ ಲೈನ್‌ಮನೆಯಲ್ಲಿ, ತಂದೆ ಪಣಿ ಯರವರ ಬಸವ ಅವರೊಂದಿಗೆ ವಾಸವಾಗಿದ್ದ ಅಯ್ಯಪ್ಪ, ಶ್ರೀಮಂಗಲದ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ಸೌದೆ ತರಲೆಂದು ಹೋಗಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಕೊಟ್ರಂಗಡ ಅಶ್ವಥ್‌ ಅವರ ತೋಟದಲ್ಲಿಮೃತದೇಹ ಪತ್ತೆಯಾಗಿದೆ. ಹುಲಿಯ ಕೂದಲು ಮೃತದೇಹದ ಮೇಲೆ ಬಿದ್ದಿದ್ದಾಗಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT