ADVERTISEMENT

ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:00 IST
Last Updated 14 ಸೆಪ್ಟೆಂಬರ್ 2021, 7:00 IST

ತುಮಕೂರು: ಬೆಸ್ಕಾಂ ನಿಟ್ಟೂರು ಉಪ ಸ್ಥಾವರದ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಂಡಿದ್ದು, ಸೆ. 15ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸ್ಥಳಗಳು: ಕಡಬ, ಸಿ.ಎಸ್. ಪುರ, ಚೇಳೂರು ಹಾಗೂ ಗುಬ್ಬಿ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳು.

ಟ್ಯಾಲಿ ತರಬೇತಿ

ADVERTISEMENT

ತುಮಕೂರು: ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ರುಡ್‍ಸೆಟ್ ಸಂಸ್ಥೆಯು ಜಿಲ್ಲಾ ವ್ಯಾಪ್ತಿಗೆ ಒಳಪಡುವ ನಿರುದ್ಯೋಗಿ ಯುವಕರಿಗೆ 30 ದಿನಗಳ ಮೋಟಾರ್ ರೀವೈಂಡಿಂಗ್ ಹಾಗೂ ಯುವಕ, ಯುವತಿಯರಿಗೆ ಕಂಪ್ಯೂಟರ್‌ ಟ್ಯಾಲಿ ತರಬೇತಿ ನೀಡಲು ಸೆ. 15ರಂದು ನೇರ ಸಂದರ್ಶನ ಏರ್ಪಡಿಸಿದೆ.

18ರಿಂದ 45ರ ವಯೋಮಿತಿಯಲ್ಲಿರುವ ಕನ್ನಡ ಓದಲು, ಬರೆಯಲು ಬಲ್ಲ ಬಿಪಿಎಲ್ ಪಡಿತರ ಚೀಟಿ ಹೊಂದಿದವರು ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗಾಗಿ ದೂರವಾಣಿ 080-27728166, ಮೊಬೈಲ್‌ 91138 80324 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.