ADVERTISEMENT

ಗಣಪತಿ ಸಚ್ಚಿದಾನಂದ ಆಶ್ರಮದ ಗಿಳಿ ನಟ ದರ್ಶನ್‌ ತೋಟಕ್ಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 21:29 IST
Last Updated 11 ಮೇ 2021, 21:29 IST
ಚಿತ್ರನಟ ದರ್ಶನ್‌ಗೆ, ಗಿಳಿಯನ್ನು ಕೊಡುಗೆಯಾಗಿ ನೀಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಚಿತ್ರನಟ ದರ್ಶನ್‌ಗೆ, ಗಿಳಿಯನ್ನು ಕೊಡುಗೆಯಾಗಿ ನೀಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಮೈಸೂರು: ನಗರದ ಗಣಪತಿ ಸಚ್ಚಿದಾನಂದ ಆಶ್ರಮದ ‘ಶುಕವನ’ದಗಿಳಿಯೊಂದನ್ನು, ಚಿತ್ರನಟ ದರ್ಶನ್‌ ಕೊಡುಗೆಯಾಗಿ ಪಡೆದಿದ್ದಾರೆ.

ಸೋಮವಾರ ಆಶ್ರಮಕ್ಕೆ ಭೇಟಿ ನೀಡಿದ್ದ ದರ್ಶನ್‌, ಸ್ವಾಮೀಜಿಯ ದರ್ಶನ ಪಡೆದು, ಕೆಲ ಹೊತ್ತು ಮಾತುಕತೆ ನಡೆಸಿದರು. ನಂತರ ಶುಕವನವನ್ನೂ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಅವರಿಗೆ ರೆಡ್‌ ಹೆಡೆಡ್‌ ಅಮೆಜಾನ್ ಗಿಳಿಯೊಂದು ಇಷ್ಟವಾಗಿದ್ದು, ಅದನ್ನು ತಮಗೆ ನೀಡುವಂತೆ ಸ್ವಾಮೀಜಿಯನ್ನು ಕೋರಿದ್ದಾರೆ. ದರ್ಶನ್‌ ಅಪೇಕ್ಷೆಗೆ ಸ್ಪಂದಿಸಿದ ಸ್ವಾಮೀಜಿ, ಗಿಳಿಯೊಂದನ್ನು ಕೊಡುಗೆಯಾಗಿ ನೀಡಿ ಆಶೀರ್ವದಿಸಿದರು ಎಂದು ಮಠದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.