ಮೈಸೂರು: ನಗರದ ಗಣಪತಿ ಸಚ್ಚಿದಾನಂದ ಆಶ್ರಮದ ‘ಶುಕವನ’ದಗಿಳಿಯೊಂದನ್ನು, ಚಿತ್ರನಟ ದರ್ಶನ್ ಕೊಡುಗೆಯಾಗಿ ಪಡೆದಿದ್ದಾರೆ.
ಸೋಮವಾರ ಆಶ್ರಮಕ್ಕೆ ಭೇಟಿ ನೀಡಿದ್ದ ದರ್ಶನ್, ಸ್ವಾಮೀಜಿಯ ದರ್ಶನ ಪಡೆದು, ಕೆಲ ಹೊತ್ತು ಮಾತುಕತೆ ನಡೆಸಿದರು. ನಂತರ ಶುಕವನವನ್ನೂ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಅವರಿಗೆ ರೆಡ್ ಹೆಡೆಡ್ ಅಮೆಜಾನ್ ಗಿಳಿಯೊಂದು ಇಷ್ಟವಾಗಿದ್ದು, ಅದನ್ನು ತಮಗೆ ನೀಡುವಂತೆ ಸ್ವಾಮೀಜಿಯನ್ನು ಕೋರಿದ್ದಾರೆ. ದರ್ಶನ್ ಅಪೇಕ್ಷೆಗೆ ಸ್ಪಂದಿಸಿದ ಸ್ವಾಮೀಜಿ, ಗಿಳಿಯೊಂದನ್ನು ಕೊಡುಗೆಯಾಗಿ ನೀಡಿ ಆಶೀರ್ವದಿಸಿದರು ಎಂದು ಮಠದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.