ADVERTISEMENT

ಸರ್ಜರಿ: ಚೇತರಿಸಿಕೊಳ್ಳುತ್ತಿರುವ ಪದ್ಮಶ್ರೀ ಪುರಸ್ಕೃತ ಹಾಡುಗಾರ್ತಿ ಬಾಂಬೆ ಜಯಶ್ರೀ

ಪಿಟಿಐ
Published 24 ಮಾರ್ಚ್ 2023, 12:25 IST
Last Updated 24 ಮಾರ್ಚ್ 2023, 12:25 IST
ಬಾಂಬೆ ಜಯಶ್ರೀ
ಬಾಂಬೆ ಜಯಶ್ರೀ   

ಚೆನ್ನೈ: ಬ್ರಿಟನ್‌ನಲ್ಲಿ ಪ್ರವಾಸದಲ್ಲಿದ್ದ ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕಿ ಬಾಂಬೆ ಜಯಶ್ರೀ ಅವರು ರಕ್ತನಾಳ ಸಂಬಂಧಿತ ಸರ್ಜರಿಗೆ ಒಳಗಾಗಿದ್ದು, ಅವರಿಗೆ ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ಜಯಶ್ರೀ ಅವರ ಕುಟುಂಬ ಶುಕ್ರವಾರ ತಿಳಿಸಿದೆ.

‘ಸಂಗೀತ ಕಾರ್ಯಕ್ರಮ ನೀಡಲು ಲಂಡನ್‌ಗೆ ಜಯಶ್ರೀ ತೆರಳಿದ್ದರು. ಈ ಸಂದರ್ಭ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ವೈದ್ಯಕೀಯ ಪರೀಕ್ಷೆಗಳ ನಂತರ ಅವರನ್ನು ರಕ್ತನಾಳ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಈಗ ಅವರ ಆರೋಗ್ಯ ಸ್ಥಿತಿ ಉತ್ತಮಗೊಳ್ಳುತ್ತಿದ್ದು, ಕೆಲವು ದಿನಗಳ ವಿಶ್ರಾಂತಿ ನಂತರ ಸಂಪೂರ್ಣ ಚೇತರಿಸಿಕೊಳ್ಳುತ್ತಾರೆ‘ ಎಂದು ಜಯಶ್ರೀ ಕುಟುಂಬ ಹೇಳಿದೆ.

ಪದ್ಮಶ್ರೀ ಪುರಸ್ಕೃತ ಬಾಂಬೆ ಜಯಶ್ರೀ ಅವರು ಕರ್ನಾಟಕ ಸಂಗೀತ ಮಾತ್ರವಲ್ಲದೇ ತಮಿಳು ಚಿತ್ರಗೀತೆಗಳ ಹಾಡುಗಾರ್ತಿಯಾಗಿಯೂ ಜನಪ್ರಿಯರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.