ADVERTISEMENT

ಕಿರುತೆರೆ ನಟ ಪದ್ಮನಾಭ್‌ ನಿಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 15:01 IST
Last Updated 1 ಅಕ್ಟೋಬರ್ 2020, 15:01 IST
ಆರ್‌.ಎಸ್‌.ಪದ್ಮನಾಭ್‌
ಆರ್‌.ಎಸ್‌.ಪದ್ಮನಾಭ್‌   

ಕೆ.ಆರ್.ಪೇಟೆ: ತಾಲ್ಲೂಕಿನ ರಾಯಸಮುದ್ರ ಗ್ರಾಮದ ನಿವಾಸಿ, ಕಿರುತೆರೆ, ರಂಗ ನಟ ಆರ್‌.ಎಸ್‌.ಪದ್ಮನಾಭ್‌ (47) ಗುರುವಾರ ಹೃದಯಾಘಾತದಿಂದ ನಿಧನರಾದರು.

ಪಂಚರಂಗಿ ಪಾಂಡು, ಉಘೇ ಉಘೇ ಮಹದೇಶ್ವರ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ‘ಪ್ಯಾಟಿ ಹುಡುಗೀರ್ ಹಳ್ಳಿ ಲೈಫ್’ ರಿಯಾಲಿಟಿ ಶೋ ತಮ್ಮ ಹುಟ್ಟೂರು ರಾಯಸಮುದ್ರದಲ್ಲಿ ಚಿತ್ರೀಕರಿಸಲು ಸಹಕಾರ ನೀಡಿದ್ದರು. ರಂಗಭೂಮಿಯಲ್ಲಿ ಇವರು ಪದ್ದು ಎಂದೇ ಪ್ರಸಿದ್ಧಿ ಪಡೆದಿದ್ದರು. ನಾಗಮಂಗಲದ ಕನ್ನಡ ಸಂಘ, ಮೈಸೂರಿನ ನಿರಂತರ, ಜನಮನ ರಂಗ ತಂಡಗಳಲ್ಲಿ ಸಕ್ರಿಯರಾಗಿದ್ದರು.

ಪಟ್ಟಣದ ಸುಭಾಷ್‌ನಗರದಲ್ಲಿ ಅವರು ವಾಸವಾಗಿದ್ದರು. ಗುರುವಾರ ಎದೆನೋವು ಕಾಣಿಸಿಕೊಂಡ ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ರಾಯಸಮುದ್ರ ಗ್ರಾಮದಲ್ಲಿ ಗುರುವಾರ ಸಂಜೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.