ADVERTISEMENT

ನಿಯಂತ್ರಣಕ್ಕೆ ಸಿಗದ ಕೊರೊನಾ: ದೇವರ ಮೇಲೆ ಸಿಟ್ಟಿನ ಕುರಿತ ವಿಡಿಯೊ ನಿಜವೇ?

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:30 IST
Last Updated 19 ಮೇ 2021, 19:30 IST
ಫ್ಯಾಕ್ಟ್‌ಚೆಕ್
ಫ್ಯಾಕ್ಟ್‌ಚೆಕ್   

ಕೊರೊನಾ ವೈರಸ್ ದೇಶದಾದ್ಯಂತ ರೌದ್ರರೂಪ ತಾಳಿದ್ದು, ಜನರು ರೋಸಿ ಹೋಗಿದ್ದಾರೆ. ಜನರ ಸಿಟ್ಟು ಎಷ್ಟಿದೆಯೆಂದರೆ ದೇವರ ಮೂರ್ತಿಗಳನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ದೇವರ ವಿಗ್ರಹಗಳನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಂಬಿಸುವ ವಿಡಿಯೊ ವೈರಲ್ ಆಗಿದೆ. ಮತ್ತೊಂದು ವಿಡಿಯೊದಲ್ಲಿ ವಿಗ್ರಹಗಳನ್ನು ಜನರು ನದಿಗೆ ಎಸೆಯುತ್ತಿರುವ ದೃಶ್ಯವಿದೆ. ಸುದ್ದಿ ವಾಹಿನಿಗಳು ಈ ವಿಡಿಯೊಗಳನ್ನು ಪ್ರಸಾರ ಮಾಡಿವೆ.

ಇನ್‌ವಿಡ್ ತಂತ್ರಜ್ಞಾನ ಬಳಸಿಈ ಎರಡೂ ವಿಡಿಯೊಗಳನ್ನು ಆಲ್ಟ್ ನ್ಯೂಸ್ ಪರಿಶೀಲನೆ ನಡೆಸಿದೆ. ಈ ವಿಡಿಯೊಗಳು 2019ರ ಆಗಸ್ಟ್‌ನಲ್ಲಿ ಚಿತ್ರೀಕರಿಸಿದವು. ಆದರೆ ದೇಶದಲ್ಲಿ ಕೋವಿಡ್‌ ಮೊದಲ ಪ್ರಕರಣ ವರದಿಯಾಗಿದ್ದು ಜನವರಿ 2020ರಲ್ಲಿ. ಹೀಗಾಗಿ ಕೋವಿಡ್‌ಗೂ ಈ ವಿಡಿಯೊಗಳಿಗೂ ಸಂಬಂಧವಿಲ್ಲ. ಸಾಬರಮತಿ ನದಿಗೆ ವಿಗ್ರಹಗಳನ್ನು ಬಿಡುವುದರಿಂದ ನೀರು ಮಲಿನವಾಗುತ್ತದೆ ಎಂಬ ಕಾರಣಕ್ಕೆ ನದಿತೀರ ಹಾಗೂ ಬೀದಿಗಳಲ್ಲಿ ವಿಗ್ರಹಗಳನ್ನು ಇರಿಸಲಾಗಿತ್ತು. ಮತ್ತೊಂದು ವಿಡಿಯೊವನ್ನು ತೆಲಂಗಾಣದಲ್ಲಿ ಗಣೇಶ ವಿಸರ್ಜನೆಯ ವೇಳೆ ಚಿತ್ರೀಕರಿಸಲಾಗಿದೆ. ಹಳೆಯ ವಿಡಿಯೊಗಳನ್ನು ಈಗಿನ ವಿಡಿಯೊಗಳು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT