ನವದೆಹಲಿ:ತಾಲಿಬಾನ್ ಪಡೆಗಳು ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಆ ದೇಶದಿಂದ ಪಲಾಯನ ಮಾಡಿರುವ ಖ್ಯಾತ ಪಾಪ್ ತಾರೆ ಆರ್ಯಾನ ಸಯೀದ್, ತಾಲಿಬಾನ್ ಉಗ್ರ ಸಂಘಟನೆಯನ್ನು ಸಶಕ್ತವಾಗಿ ಬೆಳೆಸಿದ್ದು ಪಾಕಿಸ್ತಾನ ಎಂದು ಕಿಡಿಕಾರಿದ್ದಾರೆ.
ಗೋಪ್ಯ ಸ್ಥಳದಲ್ಲಿದ್ದುಕೊಂಡೇಮಾಧ್ಯಮದವರೊಂದಿಗೆ ಮಾತನಾಡಿರುವ ಸಯೀದ್,ʼನಾನು ಪಾಕಿಸ್ತಾನವನ್ನು ದೂರುತ್ತೇನೆ. ತಾಲಿಬಾನ್ ಸಂಘಟನೆಯುಸದೃಢಗೊಳ್ಳುತ್ತಿರುವುದರ ಹಿಂದೆ ಪಾಕಿಸ್ತಾನ ಇದೆ ಎಂಬುದಕ್ಕೆ ಸಂಬಂಧಿಸಿದಸಾಕ್ಷ್ಯಗಳು, ವಿಡಿಯೊಗಳನ್ನು ನಾವು ಸಾಕಷ್ಟು ವರ್ಷಗಳಿಂದ ನೋಡುತ್ತೀದ್ದೇವೆ. ನಮ್ಮ ಸರ್ಕಾರವು ಪ್ರತಿ ಸಲ ತಾಲಿಬಾನ್ ಜೊತೆಮುಖಾಮುಖಿಯಾದಾಗ ಅದರ ಗುರುತುಗಳು ಸಿಗುತ್ತಿದ್ದವು.ಪಾಕಿಸ್ತಾನದ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ನಾನು ಪಾಕಿಸ್ತಾನವನ್ನು ದೂರುತ್ತೇನೆʼ ಎಂದು ಹೇಳಿದ್ದಾರೆ.
ಹಾಗೆಯೇ,ತಾಲಿಬಾನ್ ಉಗ್ರರಿಗೆ ಪಾಕಿಸ್ತಾನವೇ ತರಬೇತಿ ನೀಡುತ್ತಿದೆ ಎಂದೂ ನೇರ ಆರೋಪ ಮಾಡಿದ್ದಾರೆ.
ʼಉಗ್ರರಿಗೆಪಾಕಿಸ್ತಾನ ಸೂಚನೆಗಳನ್ನುನೀಡುತ್ತಿದೆ. ಅವರು (ಉಗ್ರರು) ಪಾಕ್ನಲ್ಲಿ ತರಬೇತಿ ಪಡೆಯಲುತಮ್ಮದೇ ನೆಲೆಗಳನ್ನು ಹೊಂದಿದ್ದಾರೆ. ಪಾಕಿಸ್ತಾನವು ಉಗ್ರರಿಗೆನೆರವು ನೀಡದಂತೆ ಮಾಡಲು ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನಕ್ಕೆ ಧನ ಸಹಾಯ ಮಾಡುವುದನ್ನು ನಿಲ್ಲಿಸಬೇಕುಎಂದು ಆಶಿಸುತ್ತೇನೆʼ ಎಂದಿದ್ದಾರೆ.
ಮುಂದುವರಿದು, ಅಂತರರಾಷ್ಟ್ರೀಯ ಸಮುದಾಯವು ಮಾತುಕತೆ ನಡೆಸಿ ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸಲುಪರಿಹಾರ ಕಂಡುಕೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.
ಅಫ್ಗಾನಿಸ್ತಾನದ ಬೆಳವಣಿಗೆಗಳ ವಿಚಾರದಲ್ಲಿ ಭಾರತ ಸರ್ಕಾರ ನಡೆಸಿದ ಪ್ರಯತ್ನಗಳನ್ನು ಶ್ಲಾಘಿಸಿರುವಅವರು ಭಾರತವನ್ನು ʼನಿಜವಾದ ಸ್ನೇಹಿತʼ ಎಂದು ಬಣ್ಣಿಸಿದ್ದಾರೆ.
ʼನಮಗಾಗಿ ಭಾರತ ಯಾವಾಗಲೂ ಒಳ್ಳೆಯದನ್ನೇ ಮಾಡಿದೆ. ಭಾರತ ನಿಜವಾದ ಸ್ನೇಹಿತ. ಆ ದೇಶದವರು ನಮ್ಮ ಜನರಿಗೆ, ನಿರಾಶ್ರಿತರಿಗೆ ಅಪಾರನೆರವು ನೀಡಿದ್ದಾರೆ ಮತ್ತು ದಯೆ ತೋರಿದ್ದಾರೆ. ಈ ಹಿಂದೆ ಭಾರತದಲ್ಲಿದ್ದ ಅಫ್ಗನ್ನರು ಆ ದೇಶ ಮತ್ತು ಅಲ್ಲಿನ ಜನರ ಬಗ್ಗೆ ಮೆಚ್ಚುಗೆಯ ಮಾತುಗಳನ್ನೇ ಆಡಿದ್ದಾರೆ. ನಾವು ಭಾರತಕ್ಕೆ ಕೃತಜ್ಞರಾಗಿರುತ್ತೇವೆʼ ಎಂದೂ ಹೇಳಿಕೊಂಡಿದ್ದಾರೆ.
ʼಅಫ್ಗಾನಿಸ್ತಾನದ ಪರವಾಗಿ ಭಾರತಕ್ಕೆ ನನ್ನ ತುಂಬು ಹೃದಯದಧನ್ಯವಾದ ಹೇಳಲುಬಯಸುತ್ತೇನೆ.ನಮ್ಮ ನೆರೆಹೊರೆಯಲ್ಲಿರುವ ಏಕೈಕ ಉತ್ತಮ ಮಿತ್ರ ರಾಷ್ಟ್ರಭಾರತ ಎಂದು ನಾವು ಇತ್ತೀಚಿನ ವರ್ಷಗಳಲ್ಲಿ ಅರಿತುಕೊಂಡಿದ್ದೇವೆʼ ಎಂದಿದ್ದಾರೆ.
ಅಫ್ಗಾನಿಸ್ತಾನ ಸೇನೆಗೆ ಅಮೆರಿಕ ಪಡೆಗಳ ಬೆಂಬಲ ಕ್ಷೀಣಿಸುತ್ತಿದ್ದಂತೆ ತಾಲಿಬಾನಿಗಳು ಮತ್ತೆಹಿಡಿತ ಸ್ಥಾಪಿಸಿದ್ದಾರೆ. 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ.
ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಉಗ್ರರು ವಶಪಡಿಸಿಕೊಳ್ಳುತ್ತಿದ್ದಂತೆಯೇ ತಮ್ಮ ಪತಿಯೊಂದಿಗೆ ಆರ್ಯಾನ ಸಯೀದ್ ದೇಶ ತೊರೆದಿದ್ದಾರೆ.
ಇವನ್ನೂ ಓದಿ
*ಅಫ್ಗಾನ್ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಜಿ7 ಸಭೆ ಕರೆದ ಬ್ರಿಟನ್ ಪ್ರಧಾನಿ ಬೋರಿಸ್
*ಕಾಬೂಲ್: ಬೆದರಿಕೆಯ ನಡುವೆಯೂ ಹೆಚ್ಚಿನ ಜನರನ್ನು ಸ್ಥಳಾಂತರಿಸಿದ ಅಮೆರಿಕ
*ಹತ್ತಾರು ತಾಲಿಬಾನಿಗಳನ್ನು ಕೊಂದು ಪಂಜ್ಶೇರ್ ಪ್ರಾಂತ್ಯ ವಶಕ್ಕೆ ಪಡೆದ ವಿರೋಧಿ ಪಡೆ
*ತೆರವು: ಗಡುವು ಮೀರಿದರೆ ಎಚ್ಚರ
*ಅಫ್ಗಾನಿಸ್ತಾನದಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ; ಯುನಿಸೆಫ್
*ಅಫ್ಗನ್ಗೆ ಔಷಧ ಪರಿಕರ ಪೂರೈಕೆ ಇನ್ನಷ್ಟು ವಿಳಂಬ
*ತಾಲಿಬಾನ್ ಮೂಲಭೂತವಾದದ ಕಡುವಿರೋಧಿ ಪಾಪ್ ತಾರೆ ಅಫ್ಗಾನಿಸ್ತಾನದಿಂದ ಪಲಾಯನ
*ಅಫ್ಗನ್ ತೊರೆವ ಧಾವಂತ: 7 ಬಲಿ
*ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್
*ಆಫ್ಗಾನ್ನಿಂದ ಸೇನೆ ಹಿಂತೆಗೆತ ತಾರ್ಕಿಕ ಮತ್ತು ಸರಿಯಾದ ನಿರ್ಧಾರ: ಬೈಡನ್
*ಅಫ್ಗಾನ್ ತಾಲಿಬಾನ್ ವಶವಾಗಲು ಪಾಕ್ ಗುಪ್ತಚರ ಸಂಸ್ಥೆ ಕೈವಾಡ: ಅಮೆರಿಕ ಸಂಸದ
*ಕಾಬೂಲ್ನಿಂದ ಜನರ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ತ್ವರಿತ: ಜೋ ಬೈಡನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.