ADVERTISEMENT

ಬೇಕಿದೆ ಸುಸ್ಥಿರ ಕೈಗಾರಿಕಾ ನೀತಿ

ಮಂಜುನಾಥ ಕಡೆಮನೆ
Published 11 ನವೆಂಬರ್ 2016, 19:30 IST
Last Updated 11 ನವೆಂಬರ್ 2016, 19:30 IST
ಬೇಕಿದೆ ಸುಸ್ಥಿರ ಕೈಗಾರಿಕಾ ನೀತಿ
ಬೇಕಿದೆ ಸುಸ್ಥಿರ ಕೈಗಾರಿಕಾ ನೀತಿ   

ಕರ್ನಾಟಕದ ಆರ್ಥಿಕ ಅಭಿವೃದ್ದಿಯಲ್ಲಿ ಕೃಷಿ, ಸೇವಾವಲಯ ಮತ್ತು ಕೈಗಾರಿಕರಣದ ಪಾತ್ರ ಬಹುಮುಖ್ಯವಾದದ್ದು. ಆದರೆ ಕೈಗಾರಿಕೆಗೆ ಅಸಹಜವೆನಿಸುವಂಥ ಒತ್ತನ್ನು ಸರ್ಕಾರಗಳು ನೀಡುತ್ತಿವೆ. ಇದರಿಂದಾಗಿ ಕರ್ನಾಟಕದ ನಿಸರ್ಗದ ಮೇಲೆ ನಿರಂತರ ಶೋಷಣೆ ನಡೆದಿದೆ. ಇದನ್ನು ಬದಲಾಯಿಸುವ ಕೆಲಸವನ್ನು ಈಗಲೇ ಆರಂಭಿಸದೇ ಬಹಳ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಪರಿಸರ ಸ್ನೇಹಿಯಿಂದ ಔದ್ಯಮಿಕ ವಾತಾವರಣವೊಂದನ್ನು ರೂಪಿಸುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳಬೇಕಿರುವುದು ಈ ಹೊತ್ತಿನ ಅಗತ್ಯ. ಕೈಗಾರಿಕೆಗಳಿಗೆ ಬೇಕಿರುವುದು ಮೂಲಸೌಕರ್ಯ ಮತ್ತು ಸುಶಿಕ್ಷಿತ ಮಾನವ ಸಂಪನ್ಮೂಲ. ಈ ಎರಡರ ವಿಚಾರದಲ್ಲಿಯೂ ಕರ್ನಾಟಕ ಬಹಳ ಅದೃಷ್ಟವಂತ ರಾಜ್ಯ. ಇದಕ್ಕೆ ಸುಸ್ಥಿರ ಅಭಿವೃದ್ಧಿಯ ತಂತ್ರವನ್ನು ಸೇರಿಸಿಕೊಂಡರೆ ನಿಸರ್ಗಕ್ಕೆ ಮಾರಕವಾದ ಕೈಗಾರಿಕೀಕರಣ ಸಾಧ್ಯವಿದೆ.

ಕೇವಲ ಆದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಳ್ಳದೆ ಹೆಚ್ಚಿನವರಿಗೆ ಉದ್ಯೋಗ ಒದಗಿಸುವ ಹಳ್ಳಿಗಳು ಮತ್ತು ಕೃಷಿ ಕ್ಷೇತ್ರವನ್ನು ಒಳಗೊಂಡಿರುವ ಕೈಗಾರಿಕಾ ನೀತಿಯೊಂದನ್ನು ಸರ್ಕಾರ ರೂಪಿಸಬೇಕು. ಕೃಷಿ ವಲಯವನ್ನು ಕಡೆಗಣಿಸದ, ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಳ್ಳದ ನೀತಿಯೊಂದನ್ನು ಆವಿಷ್ಕರಿಸುವುದು ಕಷ್ಟವೇನೂ ಅಲ್ಲ. ಬೃಹತ್ ಕೈಗಾರಿಕೆಗಳ ಬದಲಿಗೆ ಹಳ್ಳಿಗಾಡಿನ ವಲಸೆಯನ್ನು ತಡೆಯುವಂಥ ಸಣ್ಣ ಕೈಗಾರಿಕೆಗಳನ್ನು ಹಳ್ಳಿಗಾಡಿನಲ್ಲಿ ಪ್ರೋತ್ಸಾಹಿಸಬೇಕು. ಇವು ಕೃಷಿ ಉತ್ಪನ್ನಗಳನ್ನು ಆಧಾರವಾಗಿಟ್ಟುಕೊಂಡಿದ್ದರೆ ಒಟ್ಟು ಹಳ್ಳಿಗಾಡಿನ ಆರ್ಥಿಕತೆಯಲ್ಲಿ ಬದಲಾವಣೆ ಸಂಭವಿಸುತ್ತದೆ.

ADVERTISEMENT

ಇದರಿಂದ ಗ್ರಾಮೀಣರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದೂ ತಪ್ಪುತ್ತದೆ. ಕೃಷಿಯೇತರ ಆದಾಯವು ತಾವಿರುವ ಸ್ಥಳದಲ್ಲಿಯೇ ದೊರೆಯುವುದರಿಂದ ಕೃಷಿಯ ಆಧುನೀಕರಣದ ಪ್ರಕ್ರಿಯೆಯೂ ಸುಲಭವಾಗುತ್ತದೆ.

–ಮಂಜುನಾಥ ಕಡೆಮನೆ, ಶಿಕಾರಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.