ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಥಯಾತ್ರೆ ಮಾಡಿ, ಜನರಲ್ಲಿ ರಾಮಮಂದಿರದ ಬಗ್ಗೆ ಜಾಗೃತಿ ಮೂಡಿಸಿದ ಎಲ್.ಕೆ. ಅಡ್ವಾಣಿ ಅವರು ರಾಷ್ಟ್ರಪತಿ ಹುದ್ದೆಯಿಂದ ವಂಚಿತರಾಗುವಂತೆ ಮಾಡಿದವರು ಯಾರು? ಇದು ಪ್ರಧಾನಿ ಮೋದಿ ಅವರ ಷಡ್ಯಂತ್ರವೇ? ಅಥವಾ ಆರ್ಎಸ್ಎಸ್ ಕೈವಾಡವೇ?ಅಡ್ವಾಣಿ ಕಷ್ಟಪಟ್ಟು ಬೆಳೆಸಿದ ಪಕ್ಷಕ್ಕೆ ಮತ್ತೊಬ್ಬರು ಮಾಲೀಕರಾದರೇ ?
ಮಸೀದಿ ಧ್ವಂಸ ಪ್ರಕರಣ ಅಡ್ವಾಣಿಗೆ ಅಡ್ಡಿ ಆಗಿರಬಹುದು. ಆದರೆ ಕಷ್ಟಕಾಲದಲ್ಲಿ ಬಿಜೆಪಿಯನ್ನು ಉಳಿಸಿ ಬೆಳೆಸಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತವರು ಅಡ್ವಾಣಿ ಎಂಬುದನ್ನು ಬಿಜೆಪಿ ಕಾರ್ಯಕರ್ತರು ಅಲ್ಲಗಳೆಯಲಾರರು. ಹಾಗಾದರೆ ಅವರಿಗೆ ರಾಷ್ಟ್ರಪತಿ ಹುದ್ದೆ ಕೈತಪ್ಪಲು ಪಕ್ಷದೊಳಗಿನವರ ಕೈ ಇದೆ ಎನ್ನೋಣವೇ?
-ವಿ.ಜಿ. ಇನಾಮದಾರ, ಸಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.