ADVERTISEMENT

ಅಡ್ವಾಣಿಗೆ ಮೋಸ?

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಥಯಾತ್ರೆ ಮಾಡಿ, ಜನರಲ್ಲಿ  ರಾಮಮಂದಿರದ ಬಗ್ಗೆ ಜಾಗೃತಿ ಮೂಡಿಸಿದ ಎಲ್.ಕೆ. ಅಡ್ವಾಣಿ ಅವರು ರಾಷ್ಟ್ರಪತಿ ಹುದ್ದೆಯಿಂದ ವಂಚಿತರಾಗುವಂತೆ ಮಾಡಿದವರು ಯಾರು? ಇದು ಪ್ರಧಾನಿ ಮೋದಿ ಅವರ ಷಡ್ಯಂತ್ರವೇ? ಅಥವಾ ಆರ್ಎಸ್‌ಎಸ್‌ ಕೈವಾಡವೇ?ಅಡ್ವಾಣಿ ಕಷ್ಟಪಟ್ಟು ಬೆಳೆಸಿದ ಪಕ್ಷಕ್ಕೆ ಮತ್ತೊಬ್ಬರು ಮಾಲೀಕರಾದರೇ ?

ಮಸೀದಿ ಧ್ವಂಸ ಪ್ರಕರಣ ಅಡ್ವಾಣಿಗೆ ಅಡ್ಡಿ ಆಗಿರಬಹುದು. ಆದರೆ ಕಷ್ಟಕಾಲದಲ್ಲಿ ಬಿಜೆಪಿಯನ್ನು ಉಳಿಸಿ ಬೆಳೆಸಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತವರು ಅಡ್ವಾಣಿ ಎಂಬುದನ್ನು ಬಿಜೆಪಿ ಕಾರ್ಯಕರ್ತರು ಅಲ್ಲಗಳೆಯಲಾರರು. ಹಾಗಾದರೆ ಅವರಿಗೆ ರಾಷ್ಟ್ರಪತಿ ಹುದ್ದೆ ಕೈತಪ್ಪಲು ಪಕ್ಷದೊಳಗಿನವರ ಕೈ ಇದೆ ಎನ್ನೋಣವೇ?
-ವಿ.ಜಿ. ಇನಾಮದಾರ, ಸಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT