ADVERTISEMENT

ಬೆಂಕಿಗೆ ತುಪ್ಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST

‘ರಾಹುಲ್ ಪ್ರಾಯಶ್ಚಿತ್ತ ತೀರಾ ವಿಳಂಬ, ಅತ್ಯಲ್ಪ’ (ಪ್ರ.ವಾ., ಡಿ.5) ಲೇಖನದಲ್ಲಿ, ರಾಜಕೀಯಕ್ಕಾಗಿಯೇ ಹೊತ್ತಿಸಿರುವ ಇಂದಿನ ದೇವಾಲಯಗಳ ಬೆಂಕಿಗೆ, ಲೇಖಕ ಎ. ಸೂರ್ಯಪ್ರಕಾಶ್ ಅವರು ಚೆನ್ನಾಗಿಯೇ ತುಪ್ಪ ಸುರಿದಿದ್ದಾರೆ.

Industries are the temples of modern India ಎಂಬ ಪರಿಕಲ್ಪನೆಯಲ್ಲಿ ನೆಹರೂ ಅವರು ಕಾರ್ಖಾನೆ, ಅಣೆಕಟ್ಟು, ವಿದ್ಯುತ್ ಸ್ಥಾವರಗಳು, ಸಂಶೋಧನಾತ್ಮಕ ಪ್ರಯೋಗಶಾಲೆಗಳನ್ನು ಸ್ಥಾಪಿಸಿ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯಬೇಕೆಂದಿದ್ದರು. ಅವರ ಈ ಉತ್ಸಾಹಪೂರ್ಣವಾದ ಗುರಿಯನ್ನು ಅರಿಯದೆ, ಹಿಂದೂ ವಿರೋಧಿಯೆಂಬ ಸುಳ್ಳಿನೊಂದಿಗೆ ಹುಸಿ ಜಾತ್ಯತೀತತೆ ಎಂದು ಆಕ್ಷೇಪಿಸಿರುವುದು ಅಸಂಬದ್ಧವಷ್ಟೇ ಅಲ್ಲ ಕೋಮವಾದದ ತುತ್ತೂರಿಯೂ ಆಗಿದೆ.

-ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.