ADVERTISEMENT

ನನ್ನ ಬದುಕಿದೆ ಸ್ಪೂರ್ತಿ ನೀಡಿದಾಕೆ ನನ್ನ ತಾಯಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:49 IST
Last Updated 6 ಏಪ್ರಿಲ್ 2018, 19:49 IST

ನನ್ನ ಬದುಕಿದೆ ಸ್ಪೂರ್ತಿ ನೀಡಿದಾಕೆ ನನ್ನ ತಾಯಿ. ತಾನು ಕಳೆದುಕೊಂಡ ವಿದ್ಯೆಯನ್ನು ತನ್ನ  ಮಕ್ಕಳಿಗಾದರು ನೀಡಬೇಕು ಎಂದು ತನ್ನ ಜೀವನದ ಸುಖ ಸಂತೋಷವನ್ನೆಲ್ಲ ಮುಡಿಪಾಗಿಟ್ಟು  ತನ್ನ 4 ಮಕ್ಕಳಲ್ಲಿ ಇಬ್ಬರು ಇಂಜಿನಿಯರಿಂಗ್ ಪದವೀಧರರು, ಒಬ್ಬ ಮಗಳು ವಿಜ್ಞಾನ ಪದವೀಧರೆ ಮತ್ತೊಬ್ಬಳು ಸ್ನಾತಕೋತ್ತರ ಪತ್ರಿಕೋದ್ಯಮ ಪದವೀಧರರನ್ನಾಗಿ ಮಾಡಿದ ಹೆಮ್ಮೆ ನನ್ನ ತಾಯಿಯದು.

ಅದಕ್ಕಾಗಿ ಇಂದಿಗೂ ಹಗಲು ಇರುಳೆನ್ನದೇ ಭೂಮಿತಾಯಿಯ ನಂಬಿ ದುಡಿಯುತ್ತಿದ್ದಾಳೆ. ಒಂದು ದಿನ ನಮ್ಮ ಪಕ್ಕದ ಮನೆಯ ಪುರುಷನೊಬ್ಬ ಕುಡಿದು ಬಂದು ಹೆಂಡಿತಿ ಮಕ್ಕಳಿಗೆ ಹೊಡಿಯುವುದನ್ನು ನೋಡಿ ಅದೇ ಬೆತ್ತ ಕಿತ್ತುಕೊಂಡು ಅವನಿಗೆ ಬಾರಿಸಿ ಬುದ್ದಿಕಲಿಸಿದ ನನ್ನ ತಾಯಿಯ ಸಾಹಸ, ದೈರ್ಯ ನನಗೆ ಅಂದಿನಿಂದಲೇ  ಸ್ಫೂರ್ತಿಯಾಯಿತು.

ಮಹಿಳೆ ಸುಶಿಕ್ಷಿತಳಾದಾಗ ಮಾತ್ರ ದೌರ್ಜನ್ಯಗಳಿಂದ ಪಾರಾಗಬಹುದು ಎಂಬುದರಲ್ಲಿ ಪೂರ್ಣನಂಬಿಕೆಯನ್ನಿಟ್ಟವಳು . ನಮ್ಮ ಮನೆಯ ನೆರೆಹೊರೆಯ ಮಹಿಳೆಯರಿಗೆ ಶಿಕ್ಷಣದ ಮಹತ್ವನ್ನು ತಿಳಿಸಿಕೊಟ್ಟು ಕೈಲಾದಷ್ಟು ಆರ್ಥಿಕ ಸಹಾಯಮಾಡಿ ಶಾಲೆಬಿಟ್ಟ ಅವರ ಹೆಣ್ಣುಮಕ್ಕಳು ಮರಳಿ ಶಾಲೆಗೆ ಹೋಗುವಂತೆ ಮಾಡಿದಾಕೆ ನನ್ನ  ತಾಯಿ  ನನ್ನ ಜೀವನದ ಸ್ಫೂರ್ತಿ .

ADVERTISEMENT

-ಚೈತ್ರ ಗೌಡ ಹಾಸನ,
ಸ್ನಾತಕೋತ್ತರ ಪತ್ರಿಕೋದ್ಯಮ,

ಮಾನಸಗಂಗೋತ್ರಿ, ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.