ADVERTISEMENT

ಕಣ್ಣು ತೆರೆಸುವ ಬರಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST

‘ಸಾಮಾಜಿಕ ಸಮಾನತೆ: ಸಾಧನೆಯೊಂದೇ ನೇರದಾರಿ’ (ಸಂಪಾದಕೀಯ, ಏ. 4) ಎಂಬ ಬರಹವು ಸಾಮಾಜಿಕ ನ್ಯಾಯದ ಕಣ್ಣು ತೆರೆಸಲು ಸಹಕಾರಿಯಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವಂತಹ ಸಲಹೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಇದರಿಂದಾಗಿ ಸಹಜವಾಗಿ ದಲಿತರು ಭಯಭೀತರಾಗಿದ್ದಾರೆ. ದಲಿತರ ರಕ್ಷಣೆಗೆ ಆಧಾರವಾಗಿದ್ದ ಕಾಯ್ದೆಯ ಕಂಬವನ್ನೇ ಕಡಿದು ಹಾಕಿದಂತಾಗಿದೆ. ಇಂತಹ ಸಂದರ್ಭದಲ್ಲಿ ‘ಪ್ರಜಾವಾಣಿ’ಯ ಸಂಪಾದಕೀಯ ದಲಿತ

ರಿಗೆ ಆಸರೆಯಾಗಿ ಕಂಡು ಬರುತ್ತಿದೆ. ನೊಂದವರ ದುರ್ಬಲರ ದನಿಯಾಗಿ ನಿಲ್ಲುತ್ತಿರುವ ‘ಪ್ರಜಾವಾಣಿ’ಗೆ ಧನ್ಯವಾದಗಳು.

-ನಂಜನಹಳ್ಳಿ ನಾರಾಯಣ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.