ADVERTISEMENT

ಚರ್ಚೆ | ಪ್ರಶ್ನಾತೀತ ಪ್ರಧಾನಿ ದೇಶದ ಹಿತಕ್ಕೆ ಹಾನಿ: ಕೃಷ್ಣ ಬೈರೇಗೌಡ

ದೇಶದ ಪ್ರಧಾನಿಯನ್ನು ಯಾರೂ ಪ್ರಶ್ನಿಸುವಂತಿಲ್ಲವೇ?

​ಪ್ರಜಾವಾಣಿ ವಾರ್ತೆ
Published 21 ಮೇ 2021, 19:31 IST
Last Updated 21 ಮೇ 2021, 19:31 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಪ್ರಧಾನಿ ಪ್ರಶ್ನಾತೀತರೂ ಅಲ್ಲ, ಹಾಗೆ ಆಗಲೂಬಾರದು. ಅದರಿಂದ ಜನಹಿತ ಮತ್ತು ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ. ಅಂಧ ಸರ್ವಾಧಿಕಾರ ಬೆಳೆಯುತ್ತದೆ. ಅದು ದೇಶಕ್ಕೆ ಹಾನಿ. ಪ್ರಧಾನಿಯನ್ನು ಅಥವಾ ಸರ್ಕಾರವನ್ನು ಪ್ರಶ್ನಿಸುವುದು ದೇಶದ ಬಗ್ಗೆ ನೈಜ ಕಾಳಜಿ ಹೊಂದಿರುವ ಭಾರತೀಯನ ಹಕ್ಕು ಹಾಗೂ ಕರ್ತವ್ಯ. ಇದರಿಂದ ದೇಶ ಮತ್ತಷ್ಟು ಬಲಿಷ್ಠ, ಸದೃಢ ಅಭಿವೃದ್ಧಿಯನ್ನು ಸಾಧಿಸಬಹುದು

ನಿಜ, ‘ಪ್ರಜಾಪ್ರಭುತ್ವ ಒಂದು ಕೆಟ್ಟ ಆಡಳಿತ ವ್ಯವಸ್ಥೆ. ಆದರೆಅದು ಇಲ್ಲಿಯವರೆಗೂ ಕಂಡಂತಹ ಇತರ ಎಲ್ಲಾ ಆಡಳಿತವ್ಯವಸ್ಥೆಗಳಿಗಿಂತ ಉತ್ತಮವಾದ ವ್ಯವಸ್ಥೆ’ ಎಂಬುದು ಎಲ್ಲಾಅನುಭವಸ್ಥರ ಮಾತು.

ಪ್ರಜಾಪ್ರಭುತ್ವ ಎಂದರೆ ಐದು ವರ್ಷಕ್ಕೆ ಒಮ್ಮೆ ಮತ ಚಲಾಯಿಸುವುದಷ್ಟೆ ಅಲ್ಲ. ಚುನಾಯಿತಸರ್ಕಾರದ ನೀತಿ, ನಿಯಮ ಕಾರ್ಯವೈಖರಿಗಳನ್ನುಮಾಧ್ಯಮ, ವಿಪಕ್ಷಗಳು, ಜನರು ನಿರ್ಭೀತಿಯಿಂದವಿಶ್ಲೇಷಣೆ ಮಾಡಿ, ಅಗತ್ಯವಾದಾಗ ಟೀಕೆ, ಸಲಹೆ ನೀಡಿತಪ್ಪುಗಳನ್ನು ತಿದ್ದಿದರೆ ಮಾತ್ರ ಪ್ರಜಾಪ್ರಭುತ್ವವ್ಯವಸ್ಥೆಯು ಜನರಿಗೆ ಒಳ್ಳೆ ಆಡಳಿತ ನೀಡುತ್ತದೆ. ಚುನಾವಣೆ ಮೂಲಕ ಆಯ್ಕೆ ಆದರೆ ಅಷ್ಟೇ ಸಾಕು ಎಂಬುದು ಸರಿಯಲ್ಲ– ಹಿಟ್ಲರ್ ಸಹ ಚುನಾವಣೆಯಲ್ಲಿಆಯ್ಕೆ ಆಗಿದ್ದರು ಎಂಬುದನ್ನು ನಾವು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಅಧಿಕಾರಕ್ಕೆ ಇತಿಮಿತಿ ಇಲ್ಲದಿದ್ದರೆ,ಸರ್ವಾಧಿಕಾರ ಬೆಳೆಯುತ್ತದೆ, ದೇಶ ಅವನತಿ ಕಾಣುತ್ತದೆ.

ADVERTISEMENT

ಹಾಗಾಗಿಯೇ ನಮ್ಮ ಸಂವಿಧಾನವು ಎಲ್ಲ ಭಾರತೀಯರಿಗೆ ಮೂಲಭೂತ ವಾಕ್ ಮತ್ತುಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ.

‘ಲಸಿಕೆ ರಫ್ತು ಮಾಡಿದ್ದು ಏಕೆ?’ ಎಂದು ಭಿತ್ತಿಪತ್ರಹಾಕಿದ್ದಕ್ಕೆ 25 ಭಾರತೀಯರ ಮೇಲೆ 2-3 ತರಹದಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಯಿತು. ಈ ಪ್ರಕರಣವನ್ನು ನೋಡಿದರೆ, ನಾವು ಪ್ರಜಾಪ್ರಭುತ್ವಭಾರತದಲ್ಲಿದ್ದೇವೆಯೇ? ಸಂವಿಧಾನಾತ್ಮಕ, ಕಾನೂನು ಆಧಾರಿತಆಡಳಿತವೇ ಇದು ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಈ ಪ್ರಶ್ನೆಗೆ, ‘ಭಿತ್ತಿಪತ್ರ ಹಾಕಿದವರು ದೆಹಲಿಯ ಅಂದ ಕೆಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದಕಾನೂನು ಮತ್ತು ಲಾಕ್‍ಡೌನ್‍ನಲ್ಲಿ ಒಡಾಡಬಾರದೆಂಬನಿಯಮವನ್ನು ಉಲ್ಲಂಘಿಸಿದ್ದಾರೆ’ ಎಂಬುದು ಪೊಲೀಸರ ಸಮರ್ಥನೆ. ಇದಕ್ಕಿಂತ ಹಾಸ್ಯಾಸ್ಪದ ನೆಪಮತ್ತೊಂದಿರಲಿಕ್ಕಿಲ್ಲ. ಸಿನಿಮಾ, ರಾಜಕೀಯ ಮತ್ತು ನಾನಾ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದ ಕೋಟ್ಯಂತರಭಿತ್ತಿಪತ್ರಗಳು ದೆಹಲಿಯ ಗೋಡೆಗಳಲ್ಲಿ ಇವೆ. ಎಷ್ಟು ಕೇಸುಗಳು ದಾಖಲಾಗಿವೆ? ದೇಶವೇಕೋವಿಡ್ ಮಹಾಮಾರಿಯಿಂದ ಪರಿತಪಿಸುತ್ತಿರುವಾಗ, ಪೊಲೀಸರಿಗೆ ಪೋಸ್ಟರ್ ಹಚ್ಚಿದವರ ಮೇಲೆ ಕೇಸು ಹಾಕುವುದಕ್ಕಿಂತಉಪಯುಕ್ತ ಕೆಲಸ ಬೇರೆ ಏನೂ ಇಲ್ಲವೆ?

ನಿಜವಾದ ಕಾರಣ: ಸರ್ಕಾರದ ಲಸಿಕೆ ನೀತಿ ಮತ್ತು ಲಸಿಕೆ ಕೊರತೆ ವಿಷಯ ಪ್ರಶ್ನಿಸಿದ್ದನ್ನು ಪ್ರಧಾನಿ ಮತ್ತು ಅವರ ಗೃಹ ಸಚಿವರಿಗೆ ಸಹಿಸಲಾಗಿಲ್ಲ. ಹಾಗಾಗಿಯೇ ಇದು ಘೋರಾಪರಾಧ. ಅದಕ್ಕಾಗಿ ಒಬ್ಬೊಬ್ಬರ ಮೇಲೂ 2-3 ತರಹದಕೇಸು.ಪ್ರಧಾನಿ ಅಥವಾ ಸರ್ಕಾರದ ನೀತಿಗಳನ್ನು ಯಾರೇಪ್ರಶ್ನಿಸಿದರೂ ಅವರನ್ನು ಅಪರಾಧಿಗಳು,ದೇಶದ್ರೋಹಿಗಳು ಅಥವಾ ಭಯೋತ್ಪಾದಕರು ಎಂದುಬಿಂಬಿಸಿ, ತರಹೇವಾರಿ ಕೇಸುಗಳನ್ನು ಹಾಕುವ ಪರಿಪಾಟ2014 ರಿಂದಲೂ (ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನಗಳಿಂದ) ನಡೆದಿದೆ. ನೈಜ ಪ್ರಶ್ನೆಗಳಿಗೆ ದೇಶ ಭಕ್ತಿಯ ಟೀಕೆ ಎಂಬ ಹಣೆಪಟ್ಟಿ ಕಟ್ಟಿದರೆ, ಆ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯಿಂದ ಸಲೀಸಾಗಿ ತಪ್ಪಿಸಿಕೊಳ್ಳಬಹುದು. ಜೊತೆಗೆಪ್ರಶ್ನೆ ಕೇಳಿದ ಪ್ರಜ್ಞಾವಂತ ಪ್ರಜೆಯನ್ನು ದೇಶದ್ರೋಹಿ ಎಂದು ಬ್ರ್ಯಾಂಡ್ ಮಾಡಿ, ಅವರನ್ನು ಒಂದಷ್ಟುಬೈದರೆ, ಇನ್ನೊಂದಷ್ಟು ವೋಟು ಗಿಟ್ಟಿಸಬಹುದು. ಇದರಿಂದ ದುಪ್ಪಟ್ಟು ಲಾಭ.

ಬಿಜೆಪಿ, ಆ ಪಕ್ಷದ ನಿಷ್ಠಾವಂತರ ಪಡೆ, ಆಯ್ದ ‘ಮಾಧ್ಯಮ’ಗಳು, ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಜತೆಗೆ ಸರ್ಕಾರಿ ಸಂಸ್ಥೆಗಳ ದುರುಪಯೋಗದ ಮೂಲಕ ಈ ಕೆಲಸವನ್ನು ಕಳೆದ ಏಳು ವರ್ಷಗಳಿಂದ ಮಾಡುತ್ತಿವೆ. ದೆಹಲಿಯಲ್ಲಿ ಇತ್ತೀಚೆಗೆ ದಾಖಲಾದ ಪ್ರಕರಣ ಒಂದುಉದಾಹರಣೆ ಅಷ್ಟೇ. ಕಳೆದ ಏಳು ವರ್ಷಗಳಲ್ಲಿ ಇವರನ್ನುಪ್ರಶ್ನಿಸಿದವರ ಮೇಲೆ ದೇಶದ್ರೋಹ, ಭಯೋತ್ಪಾದನೆ ತಡೆ, ಮಾಹಿತಿತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಹೀಗೆ ಸಾವಿರಾರುಭಾರತೀಯರ ಮೇಲೆ ನಾನಾ ಕಾಯ್ದೆ ಅಡಿ ಹಾಕಿರುವಕೇಸುಗಳನ್ನು ಲೆಕ್ಕ ಹಾಕಲಿಕ್ಕೆ ಸಾಧ್ಯವಿಲ್ಲ. ಅತ್ಯಂತ ಗಂಭೀರವಾದ ದೇಶದ್ರೋಹ ಪ್ರಕರಣಗಳದ್ದು ಮಾತ್ರ ಅಂಕಿ ಅಂಶ ಕಲೆ ಹಾಕಲಾಗಿದೆ.2010ರಿಂದ 2020ರನಡುವೆ ದಾಖಲಾಗಿರುವ ದೇಶದ್ರೋಹ ಪ್ರಕರಣಗಳ ಪೈಕಿ ಶೇ 96ರಷ್ಟು 2014ರ ನಂತರ ದಾಖಲಾಗಿವೆ. ಇವೆಲ್ಲವೂ ಸರ್ಕಾರ ಮತ್ತು ರಾಜಕಾರಣಿಗಳನ್ನು ಟೀಕಿಸಿದ್ದಕ್ಕೆ ದಾಖಲಿಸಲಾಗಿರುವ ಪ್ರಕರಣಗಳು.

2020ರವರೆಗೆ, ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರ ವಿರುದ್ಧ 149 ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಟೀಕಿಸಿದ್ದರ ವಿರುದ್ಧ 144 ಪ್ರಕರಣಗಳು ದಾಖಲಾಗಿವೆ. ‘ಟೀಕೆಯು ದೇಶದ್ರೋಹ ಅಲ್ಲವೇ ಅಲ್ಲ’ ಎಂದು ಸುಪ್ರೀಂ ಕೋರ್ಟ್‌ ಪದೇ ಪದೇ ಹೇಳುತ್ತಲೇ ಇದೆ. ಬಿಜೆಪಿ ಸರ್ಕಾರಗಳು ಮಾತ್ರ ದೇಶದ್ರೋಹ ಪ್ರರಕಣಗಳನ್ನು ಎಡೆಬಿಡದೆ ದಾಖಲಿಸುತ್ತಲೇ ಇವೆ.

ಇವುಗಳೊಂದಿಗೆ ತರಹೇವಾರಿ ಕಾನೂನುಗಳ ಅಡಿ ದಾಖಲಾಗಿರುವ ಬೋಗಸ್ ಕೇಸುಗಳಿಗೆ ಲೆಕ್ಕವೇ ಇಲ್ಲ. 2016ರಿಂದ 2019ರ ನಡುವೆ ದೇಶದ್ರೋಹ ಪ್ರಕರಣಗಳ ‍ಪ್ರಮಾಣ ಶೇ 160ರಷ್ಟು ಏರಿಕೆ ಕಂಡಿವೆ. ಇದೇ ಅವಧಿಯಲ್ಲಿ ಈಮೊಕದ್ದಮೆಗಳು ನ್ಯಾಯಾಲಯಗಳಲ್ಲಿ ರುಜುವಾತುಆದ ಪ್ರಮಾಣ ಶೇ 33.3ರಿಂದ ಶೇ 3.3ಕ್ಕೆ ಕುಸಿದಿದೆ. 100ಕ್ಕೆ 3ಪ್ರಕರಣಗಳು ಮಾತ್ರ ಸಾಬೀತಾಗಿವೆ ಅಂದರೆ ಉಳಿದವು ಬಹುತೇಕಬೋಗಸ್ ದೂರುಗಳು. ಅವುಗಳ ಉದ್ದೇಶ ಜನರ ಬಾಯಿಮುಚ್ಚಿಸುವುದು. ಸರ್ಕಾರವನ್ನು ಪ್ರಶ್ನಾತೀತವಾಗಿಮಾಡುವುದು. ‘ಹೇಗೂ ಖುಲಾಸೆಆಗಿದೆಯಲ್ಲ ಬಿಡಿ’ ಎಂದು ಹೇಳುವ ಕೆಲವರು ಸಮಾಧಾನ ಪಡಿಸಲು ನೋಡಬಹುದು. ಆದರೆ ಕೇಸುಗಳನ್ನು ಹಾಕಿಸಿಕೊಂಡು, ಜಾಮೀನು ಸಿಗದೆ ಸೆರೆವಾಸಅನುಭವಿಸಿ, ವರ್ಷಾನುಗಟ್ಟಲೆ ಕೋರ್ಟ್‌ ಸುತ್ತಿ, ಸಂಪಾದನೆಕಳೆದುಕೊಂಡ ಮೇಲೆ, ವಾಕ್ ಸ್ವಾತಂತ್ರ್ಯವನ್ನು ಮರೆತು,ಬಾಯಿ ಮುಚ್ಚಿಕೊಂಡು ಬದುಕೋದು ಲೇಸು ಅಂತ ಎಂಥವರಿಗೂ ಅನ್ನಿಸುತ್ತದೆ. ಅವರನ್ನು ನೋಡುವವರಿಗೂ ‘ಬಾಯಿ ಮುಚ್ಚಿ, ಇಲ್ಲಾಅಂದರೆ...’ ಅನ್ನೋ ಸ್ಪಷ್ಟ ಸಂದೇಶ ತಾನೇ ತಾನಾಗಿಹೋಗಿರುತ್ತದೆ.

ಹಾಗಾಗಿ, ಎಲ್ಲಿ ಉಳಿಯಿತು ಸಂವಿಧಾನಬದ್ಧ ಅಭಿವ್ಯಕ್ತಿ ಮತ್ತು ವಾಕ್ಸ್ವಾತಂತ್ರ್ಯ? ಆಳುವ ಸರ್ಕಾರಗಳು ಏನು ಏಡವಟ್ಟುಮಾಡಿದರೂ ಪ್ರಶ್ನೆ ಮಾಡುವವರು ಇಲ್ಲವಾದರೆ, ‘ದೊರೆಯ ಬಟ್ಟೆಏಲ್ಲಾ ಕಳಚಿ ಹೋಗಿದ್ದರೂ ದೊರೆಯಪೋಷಾಕುಗಳನ್ನು ಹಾಡಿ ಹೊಗಳುವುದಷ್ಟೆ’ ಉಳಿದವರಘನ ಕಾರ್ಯ. ಇನ್ನು ಆ ರಾಜನ ರಾಜ್ಯದ ಪರಿಸ್ಥಿತಿಏನಾಗಬೇಕು? ಅದಕ್ಕಾಗಿಯೇ ಸರ್ಕಾರವನ್ನುನಿರಂತರ ವಿಮರ್ಶೆಗಳಿಗೆ ಒಳಪಡಿಸಬೇಕು, ಸಲಹೆ ನೀಡಬೇಕು,ತಪ್ಪುಗಳನ್ನು ತೋರಿಸಿ, ತಿದ್ದಬೇಕು. ಆಗ ಮಾತ್ರದೇಶದ
ಅಭಿವೃದ್ಧಿ ಸಾಧ್ಯ.

ದಿಶಾರವಿ ಪ್ರಕರಣದಲ್ಲಿನ್ಯಾಯಾಲಯ ಹೀಗೆ ಹೇಳಿದೆ: ‘ಸರ್ಕಾರದ ಒಣ ಪ್ರತಿಷ್ಠೆರಕ್ಷಣೆಗಾಗಿ ಇರೋದಲ್ಲ ದೇಶದ್ರೋಹ ಕಾನೂನು... ಪ್ರಶ್ನೆ ಮಾಡಿದರೆ ಪೌರರನ್ನು ಜೈಲಿಗೆ ಹಾಕುವುದಕ್ಕೆ ಆಗುವುದಿಲ್ಲ’. ‘ಜನರು ಅವರ ಸಮಸ್ಯೆಯನ್ನು ಹೇಳಿಕೊಳ್ಳುವುದರ ಮೇಲೆ ನಿರ್ಬಂಧ ಹೇರಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ. ಜನ ತಪ್ಪು ಹೇಳುತ್ತಿದ್ದಾರೆ ಎಂದು ಭಾವಿಸದೆ,ಅವರ ಧ್ವನಿಗೆ ಮುಕ್ತ ಅವಕಾಶ ನೀಡಿ, ಆಲಿಸಿ!’ ಎಂದುಸುಪ್ರೀಂ ಕೋರ್ಟ್‌ ಇದೇ ಏಪ್ರಿಲ್ 30ರಂದು ಹೇಳಿದೆ. ಆದರೂಇವು ಯಾವುವನ್ನೂ ಲೆಕ್ಕಿಸದೆ ಕೇಸುಗಳನ್ನು ಹಾಕಿಜನಧ್ವನಿಯನ್ನು ಅಡಗಿಸುವ, ಜನರನ್ನು ಹೆದರಿಸುವ ಕಾರ್ಯ 2014ರಿಂದಇಂದಿನವರೆಗೂ ನಡೆದೇ ಇದೆ.

ಪ್ರಧಾನಿ ಪ್ರಶ್ನಾತೀತರೂ ಅಲ್ಲ, ಹಾಗೆ ಆಗಲೂಬಾರದು. ಅದರಿಂದ ಜನಹಿತ ಮತ್ತು ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ. ಅಂಧಸರ್ವಾಧಿಕಾರ ಬೆಳೆಯುತ್ತದೆ. ಅದು ದೇಶಕ್ಕೆ ಹಾನಿ. ಪ್ರಧಾನಿಯನ್ನು ಅಥವಾ ಸರ್ಕಾರವನ್ನುಪ್ರಶ್ನಿಸುವುದು ದೇಶದ ಬಗ್ಗೆ ನೈಜ ಕಾಳಜಿ ಹೊಂದಿರುವಭಾರತೀಯನ ಹಕ್ಕು ಹಾಗೂ ಕರ್ತವ್ಯ. ಇದರಿಂದ ದೇಶಮತ್ತಷ್ಟು ಬಲಿಷ್ಠ, ಸದೃಢ ಅಭಿವೃದ್ಧಿಯನ್ನುಸಾಧಿಸಬಹುದು.

- ಲೇಖಕ: ಕಾಂಗ್ರೆಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.