ADVERTISEMENT

ಶನಿವಾರ ಆಗಸ್ಟ್‌ 10, 1996

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 19:30 IST
Last Updated 9 ಆಗಸ್ಟ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವೃತ್ತಿಶಿಕ್ಷಣ ಪ್ರವೇಶ ಶುಲ್ಕ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ, ಆಗಸ್ಟ್‌ 9– ಕರ್ನಾಟಕ ಸರ್ಕಾರವು ವೃತ್ತಿಶಿಕ್ಷಣದ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿದಂತೆ ರೂಪಿಸಿದ್ದ ಕೆಲವು ನಿಯಮಗಳನ್ನು ಕಳೆದ ವರ್ಷದ ಆಗಸ್ಟ್‌ 11ರಂದು ರದ್ದು ಮಾಡಿ ತಾನು ಮಾಡಿದ ಕೆಲವು ಮಾರ್ಪಾಡನ್ನು ಈಗಲೂ ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್‌ ಇಂದು ಸರ್ಕಾರಕ್ಕೆ ಆಜ್ಞಾಪಿಸಿತು.

ಅನಿವಾಸಿ ಭಾರತೀಯರಿಗೆ ನೀಡುವ ಕೋಟಾವನ್ನು ಹೆಚ್ಚಿಸಬೇಕು. ಈಗಿನ ಪ್ರವೇಶ ಶುಲ್ಕವನ್ನು ಅಧಿಕಗೊಳಿಸಬೇಕು ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನ್ಯಾಯಾಲಯವು ಮಾಡಿರುವ ಪ್ರವೇಶ ಶುಲ್ಕ ನೀತಿಯಲ್ಲಿ ಮಾರ್ಪಾಡು ಮಾಡಬೇಕು ಎಂದು ಟಿಎಂಎ ಫೌಂಡೇಶನ್‌, ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಮತ್ತು ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗಗಳ ಸಮಿತಿ ಮುಂತಾದ ಸಂಸ್ಥೆಗಳು, 1995ರ ಆಗಸ್ಟ್‌ 11ರ ಆಜ್ಞೆಯನ್ನು ಪ್ರಶ್ನಿಸಿದ್ದವು.

ADVERTISEMENT

ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಸಚಿನ್‌

ಕಲ್ಕತ್ತ, ಆಗಸ್ಟ್‌ 9– ಮಹಮದ್‌ ಅಜರುದ್ದೀನ್‌ ಅವರ ಬದಲು ಸಚಿನ್‌ ತೆಂಡೂಲ್ಕರ್‌ ಈಗ ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.