ಹುಬ್ಬಳ್ಳಿ ಮಾರ್ಗದಲ್ಲಿ ಮುಂಬೈಗೆ ವೇಗದ ರೈಲು
ನವದೆಹಲಿ, ಜುಲೈ 19– ಹುಬ್ಬಳ್ಳಿ– ಮಿರಜ್ ಮಾರ್ಗವಾಗಿ ಬೆಂಗಳೂರು ಮತ್ತು ಮುಂಬೈಗೆ ಕೂಡಲೇ ಹೊಸದೊಂದು ಸೂಪರ್ ಫಾಸ್ಟ್ ರೈಲು ಬಿಡುವುದಾಗಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭರವಸೆ ನೀಡಿದ್ದಾರೆ.
‘ಅಹಮದಾಬಾದ್ ಮತ್ತು ಬೆಂಗಳೂರಿಗೆ ರೈಲೊಂದನ್ನು ಬಿಡುವ ವಿಚಾರವು ಪರಿಶೀಲನೆಯಲ್ಲಿದೆ. ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ವಲಯ ಮಂಜೂರು ಮಾಡದೇ ಹೋದುದಕ್ಕಾಗಿ ಆ ಭಾಗದ ಜನರಿಗೆ ಸಮಾಧಾನಕರವಾಗಿ ಈ ಹೊಸ ರೈಲಿನ ಜತೆಗೆ ಹುಬ್ಬಳ್ಳಿಯ ಕಾರ್ಯಾಗಾರವನ್ನು ಆಧುನೀಕರಣಗೊಳಿಸಲು ಒಟ್ಟು ₹ 55 ಕೋಟಿಯನ್ನು ಕಾಯ್ದಿರಿಸಲಾಗುವುದು. ಇದರಲ್ಲಿ ತಕ್ಷಣವೇ ಹತ್ತು ಕೋಟಿಯನ್ನು ಬಿಡುಗಡೆ ಮಾಡಲು ಪ್ರಧಾನಿ ಅವರು ಒಪ್ಪಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.