ADVERTISEMENT

25 ವರ್ಷಗಳ ಹಿಂದೆ‌| ಭಾನುವಾರ 21, ಜುಲೈ, 1996

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 19:31 IST
Last Updated 20 ಜುಲೈ 2021, 19:31 IST
   

ಬುಡಕಟ್ಟು ಸಮಸ್ಯೆ ಅಧ್ಯಯನಕ್ಕೆ ಆಯೋಗ

ನವದೆಹಲಿ, ಜುಲೈ 20 (ಪಿಟಿಐ)– ಪರಿಶಿಷ್ಟ ಬುಡಕಟ್ಟು ವರ್ಗದವರ ಸಮಸ್ಯೆಗಳನ್ನು ಅರಿಯಲು ಸಂಯುಕ್ತರಂಗ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಅಧಿಕಾರದ ಆಯೋಗವೊಂದನ್ನು ರಚಿಸಲಿದೆ.

ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆಯೋಗವು ಪರಿಶಿಷ್ಟ ವರ್ಗದವರ ಸದ್ಯದ ಪರಿಸ್ಥಿತಿ, ಸಮಸ್ಯೆ ಮತ್ತು ಅವರ ಆಶಯಗಳ ಕುರಿತು ವರದಿ ನೀಡಲಿದೆ ಎಂದು ಸಮಾಜ ಕಲ್ಯಾಣ ಖಾತೆಯ ಸಚಿವ ಬಲವಂತ ಸಿಂಗ್‌ ರಾಮೂವಾಲಿಯಾ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.