ಕಾನೂನು ಪಾಲನೆ ಸ್ಥಿತಿಹಿಂದೆಯೂ ಕೆಟ್ಟಿತ್ತು: ಅರಸು
ಬೆಂಗಳೂರು, ಜುಲೈ 25– ರಾಷ್ಟ್ರಪತಿ ಆಡಳಿತ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಪಾಲನೆ ಪರಿಸ್ಥಿತಿ ‘ಕೆಟ್ಟಿದೆ’ ಎಂಬ ಶ್ರೀ ಸಿದ್ಧವೀರಪ್ಪ ಅವರ ಅಭಿಪ್ರಾಯವನ್ನು ಆಡಳಿತ ಕಾಂಗ್ರೆಸ್ಸಿನ ಪ್ರದೇಶ ಸಮಿತಿ ಅಧ್ಯಕ್ಷ ಶ್ರೀ ಡಿ. ದೇವರಾಜ ಅರಸು ಅವರು ಒಪ್ಪುವುದಿಲ್ಲ.
ರಾಷ್ಟ್ರಪತಿ ಆಡಳಿತಕ್ಕೆ ಮುಂಚೆಯೂ ಕಾನೂನು ಪಾಲನೆ ಪರಿಸ್ಥಿತಿ ತೃಪ್ತಿಕರವಾಗಿಇರಲಿಲ್ಲವೆಂಬ ಶ್ರೀ ಅರಸು ಅವರ ಅಭಿಪ್ರಾಯವೇ ಅವರ ಈ ನಿಲುವಿಗೆ ಕಾರಣ.
ಶ್ರೀ ಸಿದ್ಧವೀರಪ್ಪ ಅವರ ಅಭಿಪ್ರಾಯವನ್ನು ಪ್ರಸ್ತಾಪಿಸಿ ಶ್ರೀಯುತರ ಪ್ರತಿಕ್ರಿಯೆಯನ್ನು ಕೇಳಿದಾಗ ಶ್ರೀ ಅರಸು ಅವರು, ‘ಈಗ ಕೆಟ್ಟಿದೆ ಎಂದರೆ ಹಿಂದೆ ತೃಪ್ತಿಕರವಾಗಿತ್ತೆಂದು ಅರ್ಥವಾಗುತ್ತದೆ. ಇದನ್ನು ನಾನು ಒಪ್ಪುವುದಿಲ್ಲ. ಹಿಂದೆಯೂ ತೃಪ್ತಿಕರವಾಗಿರಲಿಲ್ಲ ಎಂದು ತೋರಿಸಲು ನನ್ನಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.