ಕಾಳಿಯೋಜನೆ ಎರಡನೇ ಘಟ್ಟಕ್ಕೆ ಕೇಂದ್ರದ ಅಸ್ತು
ಬೆಂಗಳೂರು, ಜುಲೈ 31– ಸುಮಾರು 120 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಬೃಹತ್ ಕಾಳಿ ಜಲ ವಿದ್ಯುತ್ ಯೋಜನೆಯ ಎರಡನೇ ಘಟ್ಟಕ್ಕೆ ಕೇಂದ್ರ ಜಲ ಮತ್ತು ವಿದ್ಯುತ್ ಆಯೋಗವು ಮಂಜೂರಾತಿ ನೀಡಿದೆ ಎಂದು ರಾಜ್ಯ ವಿದ್ಯುತ್ ಕಾರ್ಪೊರೇಷನ್ ಅಧ್ಯಕ್ಷ ಎಂ. ಹಯಾತ್ ಅವರು ಇಂದು ಇಲ್ಲಿ ಪ್ರಕಟಿಸಿದರು.
ನವಂಬರ್ನಲ್ಲಿ ಚುನಾವಣೆಗೆ ಕೇಂದ್ರಕ್ಕೆ ಆಗ್ರಹ
ಮೈಸೂರು, ಜುಲೈ 31– ರಾಜ್ಯ ವಿಧಾನ ಸಭೆ ಚುನಾವಣೆ ನವಂಬರ್ ಅವಧಿಯಲ್ಲೇ ನಡೆಯಬೇಕೆಂಬ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಇಂದು ಇಲ್ಲಿ ಸ್ಪಷ್ಟಪಡಿಸಿದ ಪ್ರದೇಶ ಆಡಳಿತ ಕಾಂಗ್ರೆಸ್ ಅಧ್ಯಕ್ಷ ದೇವರಾಜ ಅರಸು ಅವರು, ರಾಜ್ಯದ ಸಂಸತ್ ಸದಸ್ಯರೂ ಇದೇ ರೀತಿ ತಿಳಿಸಿದ್ದಾರೆಂದೂ, ಈ ವಿಷಯವನ್ನು ತಾವು ಕೇಂದ್ರಕ್ಕೆ ತಿಳಿಸಿರುವುದಾಗಿಯೂಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.