ADVERTISEMENT

50 ವರ್ಷಗಳ ಹಿಂದೆ: ಬುಧವಾರ 22–9–1971

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:13 IST
Last Updated 21 ಸೆಪ್ಟೆಂಬರ್ 2021, 22:13 IST
   

ಹೇಮಾವತಿ, ಕಪಿಲಾ ಯೋಜನೆತಡೆಗೆ ಕೇರಳದ ಹೊಸ ದಾವಾ
ನವದೆಹಲಿ, ಸೆ. 21– ಕಾವೇರಿ ಜಲಾನಯನ ಪ್ರದೇಶದಲ್ಲಿ ಹೇಮಾವತಿ ಮತ್ತು ಕಪಿಲಾ ಯೋಜನೆಗಳ ಕೆಲಸವನ್ನು ಮೈಸೂರು ಸರ್ಕಾರ ಮುಂದುವರಿಸದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೇರಳ ಸರ್ಕಾರವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಸಂವಿಧಾನದ 131ನೇ ವಿಧಿ ಪ್ರಕಾರ ಹೊಸ ದಾವಾ ಹೂಡಿದೆ.

ಈ ದಾವಾದಲ್ಲಿ ಕೇಂದ್ರ, ಮೈಸೂರು ಮತ್ತು ತಮಿಳುನಾಡು ಸರ್ಕಾರಗಳು ಪ್ರತಿವಾದಿಗಳು.

ಮಾವೊ ಅಸ್ವಸ್ಥ ಅಥವಾ ಸಾವು
ಪ್ಯಾರಿಸ್‌, ಸೆ. 21– ಚೀನಿ ನಾಯಕ ಮಾವೊತ್ಸೆ–ತುಂಗ್‌ ಅವರು ಮರಣ ಹೊಂದಿರಬಹುದು ಅಥವಾ ಹೃದಯಾಘಾತದ ನಂತರ ತೀವ್ರಅಸ್ವಸ್ಥರಾಗಿರಬಹುದು ಎಂದು ಫ್ರೆಂಚ್‌ ನ್ಯಾಷನಲ್‌ ರೇಡಿಯೊ ಇಂದು ರಾತ್ರಿ ಪ್ರಸಾರ ಮಾಡಿತು.

ADVERTISEMENT

ಚೀನಾದಲ್ಲಿನ ಇತ್ತೀಚಿನ ಸಮಸ್ಯಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿರಬಹುದಾದ ಸಂಗತಿಗಳನ್ನು ಈ ರೇಡಿಯೊ ವಿಶ್ಲೇಷಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.